For the best experience, open
https://m.justkannada.in
on your mobile browser.

ಡಿಕೆಶಿ ವಿರುದ್ದ ಸಿಬಿಐ ತನಿಖೆ ಅನುಮತಿ ವಾಪಸ್ ವಿಚಾರ: ಕ್ಯಾಬಿನೆಟ್ ನಿರ್ಧಾರ ಕಾನೂನು ಬದ್ಧವಾಗಿರುತ್ತೆ-ಸ್ಪೀಕರ್ ಯು.ಟಿ ಖಾದರ್.

06:17 PM Nov 25, 2023 IST | prashanth
ಡಿಕೆಶಿ ವಿರುದ್ದ ಸಿಬಿಐ ತನಿಖೆ ಅನುಮತಿ ವಾಪಸ್ ವಿಚಾರ  ಕ್ಯಾಬಿನೆಟ್ ನಿರ್ಧಾರ ಕಾನೂನು ಬದ್ಧವಾಗಿರುತ್ತೆ ಸ್ಪೀಕರ್ ಯು ಟಿ ಖಾದರ್

ಬೆಂಗಳೂರು,ನವೆಂಬರ್,25,2023(www.justkannada.in):   ಡಿಕೆಶಿ ವಿರುದ್ದ ಸಿಬಿಐ ತನಿಖೆ ಅನುಮತಿ ವಾಪಸ್ ವಿಚಾರ ಸಂಬಂಧ ಕ್ಯಾಬಿನೆಟ್ ನಿರ್ಧಾರ ಕಾನೂನು ಬದ್ಧವಾಗಿರುತ್ತದೆ ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್,  ಹಿಂದಿನ ಸ್ಪೀಕರ್ ತೆಗೆದುಕೊಂಡ ನಿರ್ಧಾರ.  ಬೇರೆಯವರ ಕಾಲಘಟ್ಟದಲ್ಲಿ ಆಗಿದ್ದು. ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡು ನಿರ್ಧಾರ ಕಾನೂನು ಬದ್ದವಾಗಿ ಇರುತ್ತೆ. ಹೀಗಾಗಿ ಇದರ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ. ಕಾನೂನು ತಜ್ಞರ ಸಲಹೆ ಪಡೆದು ಚರ್ಚಿಸುತ್ತೇನೆ ಎಂದರು.

ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಖಂಡಿಸಿ ಅಧಿವೇಶನದಲ್ಲಿ ಬಿಜೆಪಿ ಪ್ರತಿಭಟನೆಗೆ ನಿರ್ಧರಿಸಿರುವ ಕುರಿತು ಪ್ರತಿಕ್ರಿಯಿಸಿದ ಯುಟಿ ಖಾದರ್,  ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಈಗಾಗಲೇ ಎಲ್ಲರೂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಲ್ಲದೇ ಜಮೀರ್ ಸಹ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಹೀಗಿರುವಾಗ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸುವ ಅಗತ್ಯ ಇರಲ್ಲ ಎಂದರು.

Key words: Withdrawal - permission - CBI - Cabinet -decision - legal – Speaker- UT Khader.

Tags :

.