For the best experience, open
https://m.justkannada.in
on your mobile browser.

ಅಂಜಲಿ ಹತ್ಯೆ ಪ್ರಕರಣ: ಮೈಸೂರಿನ ಹೋಟೆಲ್ ನಲ್ಲಿ ಸಪ್ಲೇಯರ್ ಆಗಿದ್ದ ಆರೋಪಿ

04:50 PM May 17, 2024 IST | prashanth
ಅಂಜಲಿ ಹತ್ಯೆ ಪ್ರಕರಣ  ಮೈಸೂರಿನ ಹೋಟೆಲ್ ನಲ್ಲಿ ಸಪ್ಲೇಯರ್ ಆಗಿದ್ದ ಆರೋಪಿ

ಮೈಸೂರು,ಮೇ,17,2024 (www.justkannada.in): ಹುಬ್ಬಳ್ಳಿಯ ನಡೆದ ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ  ವಿಶ್ವ ಆಲಿಯಾಸ್ ಗಿರೀಶ್ ಮೈಸೂರಿನ ಹೋಟೆಲ್ ಒಂದರಲ್ಲಿ ಸಪ್ಲೇಯರ್ ಆಗಿ ಕೆಲಸ ನಿರ್ವಹಿಸಿದ್ದನು.

ಗೋವರ್ಧನ್  ಎಂಬುವವರ ಮಾಲೀಕತ್ವದ ಮೈಸೂರಿನ ಮಹಾರಾಜ  ಹೋಟೆಲ್ ನಲ್ಲಿ ಕಳೆದ ನಾಲ್ಕು ತಿಂಗಳಿಂದ ಸಪ್ಲೇಯರ್ ಆಗಿದ್ದನು.  ವಿನಾಯಕ ನರ್ಸಿಂಗ್ ಕೇರ್ ಏಜೆನ್ಸಿ ಮೂಲಕ ಬಂದಿದ್ದ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ನನ್ನು ಮೊದಲಿಗೆ ಹೋಟೆಲ್ ಮಾಲೀಕ ಗೋವರ್ಧನ್ ಅವರ ತಂದೆ ನೋಡಿಕೊಳ್ಳಲು ನೇಮಿಸಿದ್ದರು.

ಬಳಿಕ ಆರೋಪಿ ಗಿರೀಶ್  ಕೆಲಸ ಬಿಟ್ಟು ಮತ್ತೆ ಊರಿಗೆ ಹೋಗಿದ್ದ, ಮತ್ತೆ ಬಂದು ಕೆಲಸ ಕೊಡಿ ಅಂತ ಕೇಳಿಕೊಂಡ.  ಆಗ ನಮ್ಮ ಹೋಟೆಲ್ ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ. ರೂಂ ಬಾಯ್, ಸಪ್ಲೈಯರ್ ಆಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಆತ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. 10 ದಿನ 5 ಹೀಗೆ ರಜಾ ತೆಗೆದುಕೊಂಡು ‌ಬಿಟ್ಟು ಬಿಟ್ಟು ಕೆಲಸಕ್ಕೆ ಬರುತ್ತಿದ್ದ. ಕಳೆದ ಮಂಗಳವಾರ ಸಂಜೆ 5 ಸಾವಿರ ಹಣ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ವಾಪಸ್ ಬಂದಿಲ್ಲ. ಮರುದಿನ ಪೊಲೀಸರು ನನಗೆ ಕರೆ ಮಾಡಿದಾಗಲೇ ಈತ ಕೊಲೆ ಮಾಡಿದ್ದಾನೆ ಎಂಬುದು ಗೊತ್ತಾಗಿದ್ದು ಎಂದು ಮಹರಾಜ ಹೋಟೆಲ್ ಮಾಲೀಕ ಗೋವರ್ಧನ್ ಮಾಹಿತಿ ನೀಡಿದರು.

ನಮ್ಮ ಹೋಟೆಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮೊಬೈಲ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದಾ ಅಂತ ಹೇಳಿದ್ರು. ಜೊತೆಗೆ ಕಂಪನಿಯ ಫೋನ್ ನಿಂದ ಹೆಚ್ಚು ದಿನ ಮಾತನಾಡಿದ್ದಾನೆ. ಘಟನೆ ನಡೆಯುವ ಹಿಂದಿನ ದಿನ ಜೋರಾಗಿ ಕೂಗಾಡಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದನಂತೆ. ನಮ್ಮ ಹೋಟೆಲ್ ಗೆ ಏಳು ಜನ ಪೊಲೀಸರು ಬಂದಿದ್ದರು. ನಿನ್ನೆ ರಾತ್ರಿಯವರೆಗೂ ಸಹ ಪೊಲೀಸರ ನಮ್ಮ ಹೋಟೆಲ್ ನಲ್ಲಿ ಬಳಿ ಇದ್ದರು. ಆತ ದಾವಣಗೆರೆಯಲ್ಲಿ ಸಿಕ್ಕ ಬಳಿಕ ಮಧ್ಯರಾತ್ರಿ ಪೊಲೀಸರು ಇಲ್ಲಿಂದ ತೆರಳಿದ್ದಾರೆ ಎಂದು ಮಹಾರಾಜ ಹೋಟೆಲ್ ಮಾಲೀಕ ಗೋವರ್ಧನ್ ತಿಳಿಸಿದ್ದಾರೆ.

Key words: Anjali –murder-case-accused - supplier - hotel

Tags :

.