For the best experience, open
https://m.justkannada.in
on your mobile browser.

ಧರಣಿನಿರತ ರೈತರ ಬಂಧನ ಖಂಡನೀಯ- ಸಚಿವ ಪ್ರಿಯಾಂಕ್ ಖರ್ಗೆ.

10:33 AM Feb 13, 2024 IST | prashanth
ಧರಣಿನಿರತ ರೈತರ ಬಂಧನ ಖಂಡನೀಯ  ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಫೆಬ್ರವರಿ,13,2024(www.justkannada.in): ವಿವಿಧ ಬೇಡಿಕೆಗಳ  ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ದ ಹಲವು ರಾಜ್ಯಗಳ ರೈತರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ರೈತರಿಗೆ ತಡೆಯೊಡ್ಡಿ ಬಂಧಿಸಲಾಗುತ್ತಿದೆ ಇದು ಖಂಡನೀಯ ಎಂದು ಕೇಂದ್ರ ಸರ್ಕಾರದ ವಿರುದ್ದ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ,  ಧರಣೀನಿರತ ರೈತರನ್ನ ಬಂಧಿಸುವುದು ಖಂಡನೀಯ. ದೆಹಲಿಯಲ್ಲಿ ರೈತರ ಹೋರಟ ನಡೆಯುತ್ತಿದೆ.  ಪ್ರತಿಭಟನೆಗೆ ಹೋಗದಂತೆ ರೈತರನ್ನ ತಡೆಯಲಾಗುತ್ತಿದೆ  ಎಲ್ಲರಿಗೂ ಪ್ರತಿಭಟನೆ ಹಕ್ಕಿದೆ. ಹೀಗಾಗಿ ಪ್ರತಿಭಟನೆಗೆ ತೆರಳುತ್ತಿರುವ ರೈತರನ್ನ ತಡೆಯುವುದು ಕಾನೂನು ಬಾಹಿರ ಎಂದು ಕಿಡಿಕಾರಿದ್ದಾರೆ.

Key words: Arrest - farmers - strike - condemnable- Minister -Priyank Kharge.

Tags :

.