For the best experience, open
https://m.justkannada.in
on your mobile browser.

Dr. Arun Yogiraj: ಶಿಲ್ಪಿ ಅರುಣ್‌ ಯೋಗಿರಾಜ್‌ ಗೆ “ ಡಾಕ್ಟರೇಟ್‌ “  ಪ್ರದಾನ

03:11 PM Jul 30, 2024 IST | mahesh
dr  arun yogiraj   ಶಿಲ್ಪಿ ಅರುಣ್‌ ಯೋಗಿರಾಜ್‌ ಗೆ “ ಡಾಕ್ಟರೇಟ್‌ “  ಪ್ರದಾನ

Ayodhya ram mandir ram Lala sculpture Arun Yogiraj received honorary doctorate from Sanskrit university, Uttar Pradesh

ಮಥುರಾ, ಜು,30,2024: (www.justkannada.in news) ಉತ್ತರ ಪ್ರದೇಶದ ಸಂಸ್ಕೃತಿ ವಿಶ್ವವಿದ್ಯಾಲಯ ಮೈಸೂರಿ ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ.

ಅರುಣ್ ಯೋಗಿರಾಜ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಡಿ. ಫಿಲ್) ಪದವಿ ಪ್ರದಾನ ಮಾಡಿದ ಮಾಜಿ ರಾಷ್ಟ್ರಪತಿ ರಾಮ್‌ ನಾಥ್ ಕೋವಿಂದ್.‌ ಅರುಣ್‌ ಯೋಗಿರಾಜ್‌ ಅವರ ಅಸಾಧಾರಣ ಉತ್ಸಾಹ, ಕಲೆ ಮತ್ತು ಶಿಲ್ಪಕಲೆಗೆ ಸಲ್ಲಿಸಿದ ನಿಷ್ಕಳಂಕ ಸೇವೆ, ವಿಶೇಷವಾಗಿ ಸಾಂಸ್ಕೃತಿಕ ಪ್ರಾಮುಖ್ಯತೆ ಪರಿಗಣಿಸಿ ಈ ಪದವಿ ಪ್ರದಾನ.

ಪ್ರಸ್ತುತ ದೇಶದ ಅತ್ಯಂತ ಬೇಡಿಕೆಯ ಶಿಲ್ಪಿಯಾಗಿರುವ ಅರುಣ್ ಯೋಗಿರಾಜ್, ಅವರು ಚಿಕ್ಕ ವಯಸ್ಸಿನಲ್ಲಿಯೇ ಶಿಲ್ಪಕಲಾ ಜಗತ್ತಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು, ಮೈಸೂರು ರಾಜಾಶ್ರಯ ಪಡೆದ ಪೂಜ್ಯ ತಂದೆ ಹಾಗೂ ಅಜ್ಜ ಶ್ರೀ ಬಸವಣ್ಣೈ ಅವರಿಂದ ಆಳವಾಗಿ ಅರುಣ್‌ ಯೋಗಿರಾಜ್‌  ಪ್ರಭಾವಿತರಾದರು.

ಎಂಬಿಎ ಪದವಿ ಪಡೆದಿರುವ ಅರುಣ್ , 2008ರಲ್ಲಿ ಕಲೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು.ಅಂದಿನಿಂದ, ಅವರ ಕಲಾತ್ಮಕತೆಯು ಪ್ರವರ್ಧಮಾನಕ್ಕೆ ಬಂದಿದೆ, ಇದು ರಾಷ್ಟ್ರವ್ಯಾಪಿ ಮನ್ನಣೆಯನ್ನು ಗಳಿಸಿದ ಅಪ್ರತಿಮ ಶಿಲ್ಪ ರಚಿಸಲು ಕಾರಣವಾಯಿತು.

ರಾಮಲಲ್ಲಾ ಅವರ ಸೊಗಸಾದ ದೈವಿಕ ವಿಗ್ರಹವನ್ನು ಅಯೋಧ್ಯೆ ರಾಮ ಮಂದಿರಕ್ಕೆ ಆಯ್ಕೆ ಮಾಡಿದಾಗ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ದೇಶದ ಗಮನ ಸೆಳೆದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ಮುನ್ನ ನವದೆಹಲಿಯ ಇಂಡಿಯಾ ಗೇಟ್ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಹಿಂಭಾಗದ ಛಾವಣಿಯಲ್ಲಿ ಸ್ಥಾಪಿಸಲಾದ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಪ್ರತಿಮೆಯನ್ನು ಅವರು ಈ ಹಿಂದೆ ಕೆತ್ತಿದ್ದರು. ಅದೇ ಕೈಗಳು 12 ಅಡಿ ಎತ್ತರ ಮತ್ತು 35 ಟನ್ ತೂಕದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿವೆ.

2014 ರಲ್ಲಿ ಭಾರತ ಸರ್ಕಾರದ ದಕ್ಷಿಣ ವಲಯ ಯುವ ಕಲಾವಿದ ಪ್ರಶಸ್ತಿ, ಮೈಸೂರು ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, 2001 ರಲ್ಲಿ ಕರ್ನಾಟಕ ಸರ್ಕಾರದ ಜಕಣಾಚಾರಿ ಪ್ರಶಸ್ತಿ, ಶಿಲ್ಪಿಗಳ ಸಂಘದಿಂದ ಗೌರವಿಸಲ್ಪಟ್ಟ ಶಿಲ್ಪಾ ಕೌಸ್ತುಭ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ.

ಸಂಸ್ಕೃತಿ ವಿಶ್ವವಿದ್ಯಾಲಯವು ಅರುಣ್ ಯೋಗಿರಾಜ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಡಿ.ಫಿಲ್) ಗೌರವ ಡಾಕ್ಟರೇಟ್ ಪದವಿಯನ್ನು ಅತ್ಯಂತ ಗೌರವದಿಂದ ನೀಡುತ್ತಿದೆ ಎಂದು ಪದವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅರುಣ್‌ ಸಂತಸ :

ಅಯ್ಯೋಧೆ ಬಾಲರಾಮ ಮೂರ್ತಿ ಕೆತ್ತನೆ ಬಳಿಕ ಹಲವಾರು ವಿಶ್ವವಿದ್ಯಾನಿಲಯಗಳು ಗೌರವ ಪೂರ್ವಕವಾಗಿ ಡಾಕ್ಟರೇಟ್‌ ನೀಡಲು ಮುಂದೆ ಬಂದಿದ್ದವು. ಆದರೆ ಸಮಯದ ಹೊಂದಾಣಿಕೆ ಕಾರಣ ಸ್ವೀಕರಿಸಲು ಆಗಿರಲಿಲ್ಲ. ಉತ್ತರ ಪ್ರದೇಶದ ಮಥುರಾದ ಸಂಸ್ಕೃತ ಯೂನಿವರ್ಸಿಟಿ ಅವರು ಮೂರು ತಿಂಗಳ ಮೊದಲೆ ಈ ಬಗ್ಗೆ ವಿಷಯ ತಿಳಿಸಿದ್ದರು. ಹಾಗಾಗಿ ಗೌರವ ಡಾಕ್ಟರೇಟ್‌ ಸ್ವೀಕರಿಸಲು ಸಾಧ್ಯವಾಯಿತು. ನಿಜಕ್ಕೂ ಇದೊಂದು ಸಂತಸದ ಕ್ಷಣ ಎಂದು ಅರುಣ್‌ ಯೋಗಿರಾಜ್‌ ಅವರು "ಜಸ್ಟ್‌ ಕನ್ನಡ " ಗೆ ತಿಳಿಸಿದರು.

key words:  Ayodhya ram mandir, ram Lala sculpture, Arun Yogiraj, received, honorary doctorate, from, Sanskrit university, Uttar Pradesh

SUMMARY: 

 Arun Yogiraj currently most sought-after Sculptor in the country, began his journey in the world of sculpting at young age, deeply influenced by his revered father,Yogiraj and grandfather Shri Basavannai, who enjoyed the patronage of the King of Mysore.

Arun, with an MBA degree, made a decisive choice and traded his corporate suit for a sculptor’s apron dedicating himself fully to the Art that flowed through his veins during 2008. Since then, his artistry has flourished leading him to create iconic sculptures that has gained nationwide recognition. The latest one which brought spotlight on the sculptor when his exquisite divine idol of Ramlalla was selected for the Ayodhya Ram Mandir.

Tags :

.