For the best experience, open
https://m.justkannada.in
on your mobile browser.

ನಮ್ಮದು ಬದುಕು, ಬಿಜೆಪಿಯದ್ದು ಭಾವನೆ:  ಎರಡು ಟೀಮ್ ಗಳನ್ನ ಮುಗಿಸಬೇಕಿದೆ-ಡಿಸಿಎಂ ಡಿ.ಕೆ ಶಿವಕುಮಾರ್.  

04:44 PM Apr 17, 2024 IST | prashanth
ನಮ್ಮದು ಬದುಕು  ಬಿಜೆಪಿಯದ್ದು ಭಾವನೆ   ಎರಡು ಟೀಮ್ ಗಳನ್ನ ಮುಗಿಸಬೇಕಿದೆ ಡಿಸಿಎಂ ಡಿ ಕೆ ಶಿವಕುಮಾರ್   

ಮಂಡ್ಯ,ಏಪ್ರಿಲ್,17,2024 (www.justkannada.in):  ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಎನ್ನಬೇಡಿ ಎಂದಿದ್ದೆ. ಈಗ ಬಿ ಟೀಮ್ ಹೋಗಿ ಎ ಟೀಮ್ ಆಗಿದೆ. ಹೀಗಾಗಿ ಎರಡು ಟೀಮ್ ಗಳನ್ನ ಮುಗಿಸಬೇಕಿದೆ ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ದ ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಇಂದು ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಅಭ್ಯರ್ಥಿಯಾಗಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿ  ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದರು. ನಮ್ಮದು ಬದುಕು ಬಿಜೆಪಿಯವರದ್ದು ಬರೀ ಭಾವನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ತೆಗೆಯುವುದಾಗಿ ಹೇಳಿದ್ದಾರೆ.  ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ತೆಗೆಯಲು ಬಿಡಲ್ಲ ಎಂದರು.

ನಮ್ಮ ಸರ್ಕಾರದ ಗ್ಯಾರಂಟಿಯಿಂದ ಜನರ ಬದುಕು ಹಸನಾಗಿದೆ.  ಹೀಗಾಗಿ ಮಂಡ್ಯದಲ್ಲಿ ನಾನು, ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಯೇ  ಅಭ್ಯರ್ಥಿ ಎಂದು ತಿಳಿದು ಮತ ಹಾಕಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಸಚಿವರು, ಶಾಸಕರು ಉಪಸ್ಥಿತರಿದ್ದರು.

Key words: BJP, emotion, congress, DCM, DK Shivakumar.

Tags :

.