HomeBreaking NewsLatest NewsPoliticsSportsCrimeCinema

ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಕಾಂಗ್ರೆಸ್ ನವರಿಗೆ ಕೇಡುಗಾಲ ಬಂದಿದೆ- ಆರ್.ಅಶೋಕ್

06:32 PM Jul 13, 2024 IST | prashanth

ಮಂಗಳೂರು,ಜುಲೈ,13,2024 (www.justkannada.in): ಕಾಂಗ್ರೆಸ್ ನವರಿಗೆ ಕೇಡುಗಾಲ ಬಂದಿದೆ. ಇಲ್ಲಿರುವುದು ಪ್ರಜಾಪ್ರಬುತ್ವ ಸರ್ಕಾರ ಅಲ್ಲ, ತಾಲಿಬಾನ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಮಂಗಳೂರು ಶಾಸಕ ಭಾರತ ಶೆಟ್ಟಿ ವಿರುದ್ಧ FIR ಹಿನ್ನೆಲೆಯಲ್ಲಿ ಇಂದು ಮಂಗಳೂರು ಜಂಕ್ಷನ್ ನಲ್ಲಿ ಬಿಜೆಪಿ ನಾಯಕರು ಧರಣಿ ನಡೆಸಿದರು. ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ  ಆರ್.ಅಶೋಕ್,  ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ . ಸಿಎಂ ಸಿದ್ದರಾಮಯ್ಯ ತಿಂದು ತೇಗಿದ್ದಾರೆ. ಸಿದ್ದರಾಮಯ್ಯ ದಲಿತರ ಭೂಮಿ ತೆಗೆದುಕೊಂಡಿದ್ದಾರೆ. ಸೈಟ್ ಗಳ ಸುರಿಮಳೆಯಾಗಿದೆ.  ಅರ್ಜಿ ಹಾಕಿದ ಸಾಕಷ್ಟಿ ಜನರಿಗೆ ಇನ್ನೂ ಸೈಟ್ ಸಿಕ್ಕಿಲ್ಲ ಎಂದು ಹರಿಹಾಯ್ದರು.

ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಗರಣ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಇತಿಹಾಸದಲ್ಲೇ ಈ ರೀತಿ ಹಗರಣ ಆಗಿಲ್ಲ ಯಾವ ಸರ್ಕಾರವೂ ದಲಿತರ ಹಣ ನುಂಗಿಲ್ಲ. ದಲಿತರ ಹಣ ಬಾರು ಚಿನ್ನದಂಗಡಿಗೆ ಹೋಗಿದೆ. ದಲಿತರ ಹಣದಿಂದ ಜಮೀನು ಖರೀದಿಸಿದ್ದಾರೆ ಎಂದು ಕಿಡಿಕಾರಿದರು.

ಇವರು ಮಜಾ ಮಾಡಿಕೊಂಡು ಅಧಿಕಾರಕ್ಕೆ ಬಂದವರು. ಯಾರದ್ದೋ ಹೆಸರೇಳಿ ನಾವು ಬಂದಿಲ್ಲ. ದೇಶವನ್ನು ಆಳುತ್ತಿರುವ ಪಾರ್ಟಿ ಬಿಜೆಪಿ ನಮ್ಮ ಮೈಯಲ್ಲಿ ಹರಿದಿರೋದು ಭಾರತಮಾತೆಯ ರಕ್ತ ಇಂತಹ ಗೊಡ್ಡು ಬದರಿಕೆಗಳಿಗೆಲ್ಲ ನಾವು ಹೆದರುವುದಿಲ್ಲ. ಕಾಂಗ್ರೆಸ್ ನವರಿಗೆ ಕೇಡುಗಾಲ ಬಂದಿದೆ. ಇದು ತಾಲಿಬಾನ್ ಸರ್ಕಾರ ಪ್ರಜಾಪ್ರಭುತ್ವ ಸರ್ಕಾರ ಅಲ್ಲ ಎಂದು ಮಂಗಳೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

Key words: BJP, Protest, Mangalore, R.Ashok

Tags :
BJPmangalore.protestR.ashok
Next Article