HomeBreaking NewsLatest NewsPoliticsSportsCrimeCinema

ಬಿಜೆಪಿ ನಾಯಕರ ಸಿಡಿ ಬಿಡುಗಡೆಗೆ ಬಿಜೆಪಿಯವರೇ ರೆಡಿ ಇದ್ದಾರೆ- ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

02:07 PM Sep 07, 2024 IST | prashanth

ಬೆಂಗಳೂರು,ಸೆಪ್ಟಂಬರ್,7,2024 (www.justkannada.in): ಮುಡಾ, ವಾಲ್ಮೀಕಿ  ಹಗರಣದ ಬಗ್ಗೆ ಚರ್ಚೆ ಆಗಬಾರದು ಎಂದು  ನಟ ದರ್ಶನ್ ಫೋಟೊಗಳನ್ನ ಬಿಡುಗಡೆ ಮಾಡಲಾಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ಸಿಡಿ ಬಿಡುಗಡೆಗೆ ಬಿಜೆಪಿಯವರೇ ರೆಡಿ ಇದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ , ದರ್ಶನ್ ಪ್ರಕರಣ  ವೈಯಕ್ತಿಕ ಜಗಳದಿಂದ ಆಗಿರೋದು. ದರ್ಶನ್ ಕೇಸ್ ಗೂ ಸರ್ಕಾರಕ್ಕೂ ಸಂಬಂಧವಿಲ್ಲ. ದರ್ಶನ್ ಪ್ರಕರಣದಿಂದ ಕಾನೂನು ಹದಗೆಟ್ಟಿದೆಯಾ..? ಎಂದು ಪ್ರಶ್ನಿಸಿದರು.

ಮುಡಾ ಹಗರಣದಲ್ಲಿ ಬಿಜೆಪಿಗೆ ಪ್ರೂಫ್ ಇಲ್ಲ. ಬಿಜೆಪಿ ನಾಯಕರ ಸಿಡಿ ಬಿಡುಗಡೆ  ಬಿಜೆಪಿಯವರೇ ರೆಡಿ ಇದ್ದಾರೆ. ಒಬ್ಬ ನಾಯಕರು ಸ್ಟೇ ತಂದಿದ್ದಾರೆ ಅಲ್ವಾ..? ಎಂದಿದ್ದಾರೆ . ಸಿಡಿ ಮಾಡೋರು ಬಿಜೆಪಿಯವರು.  ಸಿಡಿ ಬಿಡುಗಡೆ ಮಾಡೋದು ಬಿಜೆಪಿಯವರೇ  ಎಂದು ಟಾಂಗ್ ಕೊಟ್ಟಿದ್ದಾರೆ.

Key words: BJP ,  ready, release, CD, Minister, Priyank Kharge

Tags :
BJPCDministerPriyank Khargereadyrelease
Next Article