For the best experience, open
https://m.justkannada.in
on your mobile browser.

ಬಿಜೆಪಿಯವರಿಗೆ ಸಿದ್ಧರಾಮಯ್ಯ ಆಡಳಿತ ಸಹಿಸಲು ಆಗುತ್ತಿಲ್ಲ- ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ

01:00 PM Aug 09, 2024 IST | prashanth
ಬಿಜೆಪಿಯವರಿಗೆ ಸಿದ್ಧರಾಮಯ್ಯ ಆಡಳಿತ ಸಹಿಸಲು ಆಗುತ್ತಿಲ್ಲ  ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ

ಮೈಸೂರು,ಆಗಸ್ಟ್,9,2024 (www.justkannada.in): ಮುಡಾ ಹಗರಣ ವಿರೋಧಿಸಿ ಬಿಜೆಪಿ, ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಕಿಡಿಕಾರಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಬಿಜೆಪಿಯವರಿಗೆ ಜನಪರ ಉತ್ತಮವಾಗಿ ಕೆಲಸ ಮಾಡುತ್ತಿರುವ ಸಿದ್ಧರಾಮಯ್ಯ ಆಡಳಿತವನ್ನ ಸಹಿಸಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ವಸತಿ ಸಚಿವ ಜಮೀರ್ ಅಹ್ಮದ್, ಬಿಜೆಪಿ ಅವರಿಗೆ  ಯಾವುದೇ ವಿಷಯ ಇರಲಿಲ್ಲ. ಸಿದ್ದರಾಮಯ್ಯ ಒಂದು ವರ್ಷದ ಆಡಳಿತ ಸಹಿಸೋಕೆ ಆಗುತ್ತಿಲ್ಲ ಮುಡಾ ಸೈಟ್ ಅನ್ನು ದೇವರಾಜು ಅವರ ತಂದೆ ಆಕ್ಷನ್ ನಲ್ಲಿ ಕೊಂಡುಕೊಂಡಿದ್ದರು. 2010 ರಲ್ಲಿ ಮಲ್ಲಿಕಾರ್ಜುನ ಕೊಂಡು, ಅಕ್ಕನಿಗೆ ದಾನ ಮಾಡಿದ್ದರು.ಬಿಜೆಪಿ ಅಧಿಕಾರದಲ್ಲಿ ಇದ್ದಾಗ 125 ಸೈಟ್  ಹಂಚಿದ್ದರು.  ಇದರಲ್ಲಿ  14 ಸೈಟ್ ಸಿಎಂ ಪತ್ನಿಗೆ ಕೊಟ್ಟಿದ್ದರು ಎಂದು ತಿಳಿಸಿದರು.

ಹೆಚ್.ಡಿ ಕುಮಾರಸ್ವಾಮಿ ನಾಳೆ ಮೈಸೂರಿಗೆ ಬರುತ್ತಿದ್ದಾರೆ. ಯಾವ ಕಾರಣಕ್ಕೆ ನೀವು ಪಾದಯಾತ್ರೆ ಮಾಡ್ತೀರಾ ಅಂತಾ ಕೇಳಿ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.

Key words: BJP, Siddaramaiah, administration, Minister, Jameer Ahmed

Tags :

.