For the best experience, open
https://m.justkannada.in
on your mobile browser.

ಸ್ವಕ್ಷೇತ್ರದಲ್ಲೇ ಪುತ್ರನಿಗೆ ಲೀಡ್ ಕೊಡಿಸಲು ವಿಫಲರಾದ ಸಚಿವ ಹೆಚ್.ಸಿ ಮಹದೇವಪ್ಪ.

04:33 PM Jun 04, 2024 IST | prashanth
ಸ್ವಕ್ಷೇತ್ರದಲ್ಲೇ ಪುತ್ರನಿಗೆ ಲೀಡ್ ಕೊಡಿಸಲು ವಿಫಲರಾದ ಸಚಿವ ಹೆಚ್ ಸಿ ಮಹದೇವಪ್ಪ

ಚಾಮರಾಜನಗರ,ಜೂನ್,4,2024 (www.justkannada.in):  ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಗೆಲುವು ಸಾಧಿಸಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 188000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸುನಿಲ್ ಬೋಸ್ ಜಯಭೇರಿ ಭಾರಿಸಿದ್ದು ಆದರೆ ತಂದೆ ಸಚಿವ ಹೆಚ್.ಸಿ ಮಹದೇವಪ್ಪ ಕ್ಷೇತ್ರದಲ್ಲಿ  ಲೀಡ್ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಹೌದು, ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಸುನಿಲ್ ಬೋಸ್ ಗೆ ಭರ್ಜರಿ ಮುನ್ನಡೆ ಇದೆ.  ಆದರೆ ತಂದೆ ಹೆಚ್ ಸಿ ಮಹದೇವಪ್ಪ ಗೆದ್ದು ಸಚಿವರಾಗಿರುವ ನರಸೀಪುರ ಕ್ಷೇತ್ರದಲ್ಲಿ ಸುನಿಲ್ ಬೋಸ್ ಗೆ ಹಿನ್ನೆಡೆಯಾಗಿದೆ.

ಈ ಕ್ಷೇತ್ರದ ಜನರು ಬಿಜೆಪಿಯ ಬಾಲರಾಜ್ ಗೆ ನೂರು ಮತಗಳ ಮುನ್ನಡೆ ಕೊಟ್ಟಿದ್ದು ಈ ಮೂಲಕ ಸುನಿಲ್ ಬೋಸ್ ಗೆದ್ದರೂ ಸಹ ತಂದೆ ಕ್ಷೇತ್ರದಲ್ಲಿ ಲೀಡ್ ಪಡೆಯಲು ವಿಫಲರಾಗಿದ್ದಾರೆ.

Key words: Chamaraja nagar, congress, Sunil bose, HC Mahadevappa

Tags :

.