HomeBreaking NewsLatest NewsPoliticsSportsCrimeCinema

ಕಮಿಷನ್ ಆರೋಪ : ಕೆಂಪಣ್ಣ ದಾಖಲೆ ಇದ್ದರೇ ಆಯೋಗಕ್ಕೆ ನೀಡಲಿ- ಸಚಿವ ಪ್ರಿಯಾಂಕ್ ಖರ್ಗೆ.

12:52 PM Feb 09, 2024 IST | prashanth

ಕಲ್ಬುರ್ಗಿ,ಫೆಬ್ರವರಿ,9,2024(www.justkannada.in):  ಕಾಂಗ್ರೆಸ್ ​​​ಸರ್ಕಾರದಲ್ಲೂ ಕಮಿಷನ್ ಮುಂದುವರೆದಿದೆ ಎಂದು ಆರೋಪಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರಿಗೆ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಂಪಣ್ಣ ಆರೋಪ ಮಾಡಿದ್ದಾರೆ. ಹಾಗೇನಾದರೂ ಇದ್ದರೆ ದಾಖಲೆ ನೀಡಲಿ. ಈಗಾಗಲೇ ನಾವು ಆಯೋಗ ರಚನೆ ಮಾಡಿದ್ದೇವೆ. ದಯವಿಟ್ಟು ಕೆಂಪಣ್ಣ ಅವರ ಹತ್ತಿರ ದಾಖಲೆ ಇದ್ದರೆ ಆಯೋಗಕ್ಕೆ ನೀಡಲಿ ಎಂದು ಹೇಳಿದರು.

ನಾವು ಪಾರರ್ಶಕ ಆಡಳಿತ ಮಾಡುತ್ತಿದ್ದೇವೆ. ಸಣ್ಣ ತಪ್ಪು ಆಗಿದ್ದರೂ ದಾಖಲೆ ನೀಡಲಿ. ಬಿಜೆಪಿ ಸರ್ಕಾರ ಇದ್ದಾಗ ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದರು‌. ತೆರಿಗೆ ವಿಚಾರದಲ್ಲಿ ಬಿಜೆಪಿಯವರು ಕನ್ನಡಿಗರ ಪರ ಮಾತನಾಡುತ್ತಿಲ್ಲ. ಪ್ರಧಾನಿ ಮೋದಿ ಅವರನ್ನು ಮೆಚ್ಚಿಸಲು ಹೋಗುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

Key words: Commission-allegation Kempanna- Minister -Priyank Kharge.

Tags :
AllegationCommissionKempannaministerPriyank Kharge
Next Article