For the best experience, open
https://m.justkannada.in
on your mobile browser.

ಅನುದಾನ ತಾರತಮ್ಯಗೆ ಖಂಡನೆ: ಕೇಂದ್ರದ ವಿರುದ್ದ ಕರ್ನಾಟಕ ಬಳಿಕ ಕೇರಳ ಸರ್ಕಾರ ಧರಣಿ.

10:27 AM Feb 08, 2024 IST | prashanth
ಅನುದಾನ ತಾರತಮ್ಯಗೆ ಖಂಡನೆ  ಕೇಂದ್ರದ ವಿರುದ್ದ ಕರ್ನಾಟಕ ಬಳಿಕ ಕೇರಳ ಸರ್ಕಾರ ಧರಣಿ

ನವದೆಹಲಿ,ಫೆಬ್ರವರಿ,8,2024(www.justkannada.in): ಅನುದಾನ ಹಂಚಿಕೆಯಲ್ಲಿ ತಾರತಮ್ಯ  ಖಂಡಿಸಿ ನಿನ್ನೆ ಕೇಂದ್ರ ಸರ್ಕಾರದ ವಿರುದ್ದ ಕರ್ನಾಟಕ ಸರ್ಕಾರ ಪ್ರತಿಭಟನೆ ನಡೆಸಿದ ಬಳಿಕ ಇದೀಗ ಕೇರಳ ಸರ್ಕಾರವೂ ಕೂಡ ಧರಣಿಗೆ ಮುಂದಾಗಿದೆ.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಖಂಡಿಸಿ ಇಂದು ಕೇಂದ್ರ ಸರ್ಕಾರ ವಿರುದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನವದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನ ಶಾಸಕರು ನಾಯಕರು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

Key words: Condemnation - grant –discrimination- Centre-Kerala government -protest

Tags :

.