HomeBreaking NewsLatest NewsPoliticsSportsCrimeCinema

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ 'ಗ್ಯಾರಂಟಿ' ಘೋಷಣೆ ಎಲ್ಲ ಕಡೆ ಟುಸ್ ಪಟಾಕಿ: ಆರ್.ಅಶೋಕ್ ವ್ಯಂಗ್ಯ

11:43 AM Dec 03, 2023 IST | thinkbigh

ಬೆಂಗಳೂರು, ಡಿಸೆಂಬರ್ 03, 2023 (www.justkannada.in): ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಪಂಚ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ‌ಮೋದಿ ಪ್ರಭಾವ ಎದ್ದು ಕಾಣುತ್ತಿದೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.

ಛತ್ತೀಸ್ಗಢದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ತೆಲಂಗಾಣದಲ್ಲಿ 11 ಸ್ಥಾನ ಗಳಿಸಿಕೊಂಡಿದೆ. ಎಲ್ಲಾ ಕಡೆಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವ ಸಾಧಿಸಿಕೊಂಡಿದೆ. ಕಾಂಗ್ರೆಸ್ ಎಲ್ಲಾ ಕಡೆ ಖಾಲಿ ಆಗ್ತಿದೆ. ಆದರೆ ತೆಲಂಗಾಣಕ್ಕೆ ಹೋಗಿ ರೆಸಾರ್ಟ್ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಎಲ್ಲ ಕಡೆ ಟುಸ್ ಪಟಾಕಿಯಾಗಿದೆ. ಮಧ್ಯಪ್ರದೇಶ, ರಾಜಸ್ತಾನದಲ್ಲಿ ಗ್ಯಾರಂಟಿ ಕೊಟ್ಟರೂ ಟುಸ್ ಪಟಾಕಿಯಾಗಿದೆ. ತೆಲಂಗಾಣದಲ್ಲಿ ಕೆಸಿಆರ್ ಫ್ಯಾಮಿಲಿ ರಾಜಕಾರಣ ಹಾಗೂ ಮನೆಯಿಂದಲೇ ಸರ್ಕಾರ ನಡೆಸಿರುವುದು ಅವರಿಗೆ ಹಿನ್ನಡೆಯಾಗಿದೆ ಎಂದಿದ್ದಾರೆ.

Tags :
Congress guarantee not worked our says R. AshokCongress guarantee not worked outCongress guarantee not worked says R. AshokR.ashok
Next Article