HomeBreaking NewsLatest NewsPoliticsSportsCrimeCinema

ನಾಗಮಂಗಲ ಗಲಭೆ ಘಟನೆ ಹಿಂದೆ ಕಾಂಗ್ರೆಸ್ ಇದೆ- ಕೇಂದ್ರ ಸಚಿವ ಹೆಚ್.ಡಿಕೆ ಆರೋಪ

12:20 PM Sep 13, 2024 IST | prashanth

ಮಂಡ್ಯ,ಸೆಪ್ಟಂಬರ್,13,2024 (www.justkannada.in):  ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆಯ ಘಟನೆ ಹಿಂದೆ ಕಾಂಗ್ರೆಸ್ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇಂದು ನಾಗಮಂಗಲದ ಗಲಭೆ ಪೀಡಿತ ಪ್ರದೇಶಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ನಾಗಮಂಗಲ ಘಟನೆ ಹಿಂದೆ ಕಾಂಗ್ರೆಸ್ ಇದೆ. ನಾಗಮಂಗಲದಲ್ಲಿ ಮಸೀದಿ ಬಳಿ 10 ನಿಮಿಷ ಡ್ಯಾನ್ಸ್  ಮಾಡಲು ಬಿಟ್ಟವರು ಯಾರು?  ಆಗ ಪೊಲೀಸರು ಏನು ಮಾಡುತ್ತಿದ್ದರು.  ಹೆಚ್ಚುವರಿ ಪೊಲೀಸರಿದ್ದರೇ ಪರಿಸ್ಥಿತಿ ನಿಯಂತ್ರಣ ಮಾಡಬಹುದಿತ್ತು. ಮೆರವಣಿಗೆ ವೇಳೆ ಎಎಸ್ ಪಿ, ಎಸ್ಐ ಇರಲಿಲ್ಲ ಎಂದು ಕಿಡಿಕಾರಿದರು.

ಎಫ್ ಐಆರ್ ನಲ್ಲಿ ದೊಡ್ಡ ಗುಂಪು ಗಲಭೆ ನಡೆಸಿದೆ ಎಂಬ ಉಲ್ಲೇಖವಿದೆ  ಆದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಏನು ಆಗಿಲ್ಲ ಎನ್ನುತ್ತಾರೆ.  ವಿರೇಂದ್ರ ಪಾಟೀಲ್ ಕೆಳಗಿಳಿಸಲು ಈ ಹಿಂದೆಯೂ ಗಲಾಟೆ ಮಾಡಿದರು. ಆಗ ರಾಮನಗರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ಸಿಗರೇ ಗಲಾಟೆ ಮಾಡಿದ್ದರು.  ಈಗ ಚನ್ನಪಟ್ಟ ಣ ಉಪಚುನಾವಣೆಗೆ ಓಲೈಕೆ ಮಾಡುತ್ತಿದ್ದಾರೆ ಇದನ್ನ ನೋಡಿದ್ರೆ ನಾಗಮಂಗಲದ ಕೃತ್ಯದ ಹಿಂಧೆ ಕಾಂಗ್ರೆಸ  ಇದೆ ಎಂದು ಆರೋಪಿಸಿದರು.

Key words: Congress, Nagamangala riot, Union Minister, HDK

Tags :
congressHDKNagamangala riotUnion minister
Next Article