For the best experience, open
https://m.justkannada.in
on your mobile browser.

ಬಿಜೆಪಿ ನಾಯಕರಿಂದ ನನ್ನ ವಿರುದ್ದ ಷಡ್ಯಂತ್ರ:  ನನಗೆ ನ್ಯಾಯ ಸಿಗುವ ವಿಶ್ವಾವಿದೆ- ಡಿಸಿಎಂ ಡಿ.ಕೆ ಶಿವಕುಮಾರ್.

02:45 PM Jan 01, 2024 IST | prashanth
ಬಿಜೆಪಿ ನಾಯಕರಿಂದ ನನ್ನ ವಿರುದ್ದ ಷಡ್ಯಂತ್ರ   ನನಗೆ ನ್ಯಾಯ ಸಿಗುವ ವಿಶ್ವಾವಿದೆ  ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು,ಜನವರಿ,1,2024(www.justkannada.in): ಅಕ್ರಮ ಆಸ್ತಿ ಗಳಿಕೆ ಪ್ರಕರಣ  ತನಿಖೆ ನಡೆಸುತ್ತಿರುವ ಸಿಬಿಐ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಯಾವ ಆಧಾರದ ಮೇಲೆ ನನಗೆ ನೋಟಿಸ್ ಕೊಟ್ಟಿದ್ದಾರೆ ಗೊತ್ತಿಲ್ಲ. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನನಗೆ ಕಿರುಕುಳ ನೀಡಲು ಯತ್ನಿಸುತ್ತಿದ್ದಾರೆ.  ಕೆಲ ಬಿಜೆಪಿ ನಾಯಕರು ನನ್ನ ವಿರುದ್ದ ಷಡ್ಯಂತ್ರ ಮಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಅವರು ಏನಾದರೂ ಮಾಡಲಿ ನಾನು ಹೆದರಲ್ಲ. ನನ್ನ ಜೈಲಿಗೆ ಹಾಕುವ  ಉದ್ದೇಶ ಇದ್ರೆ ಹಾಕಲಿ ಅವರು ಏನು ಮಾಡುತ್ತಾರೋ ಮಾಡಿಕೊಳ್ಳಲಿ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: Conspiracy- against -me - BJP leader- DCM- DK Shivakumar.

Tags :

.