For the best experience, open
https://m.justkannada.in
on your mobile browser.

ಪಾರ್ಕ್ ನಲ್ಲಿ ದುಷ್ಕರ್ಮಿಗಳಿಂದ ಜೋಡಿ ಕೊಲೆ.

06:02 PM Apr 18, 2024 IST | prashanth
ಪಾರ್ಕ್ ನಲ್ಲಿ ದುಷ್ಕರ್ಮಿಗಳಿಂದ ಜೋಡಿ ಕೊಲೆ

ಬೆಂಗಳೂರು,ಏಪ್ರಿಲ್,18, 2024 (www.justkannada.in):  ಪಾರ್ಕ್ ನಲ್ಲಿ ಇಬ್ಬರನ್ನು ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಜೆ.ಪಿ ನಗರದ ಸಾರಕ್ಕಿ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ.  ಸುರೇಶ್ ಅನುಷಾ ಹತ್ಯೆಯಾದವರು. ದುಷ್ಕರ್ಮಿಗಳು  ಅನುಷಾಗೆ ಚಾಕುವಿನಿಂದ ಇರುದು ಕೊಲೆ ಮಾಡಿದ್ದು ಬಳಿಕ  ಸುರೇಶ್ ಮೇಲು ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಇಂದು ಸಂಜೆ 4.15ರ ಸುಮಾರಿಗೆ ಘಟನೆ ನಡೆದಿದ್ದು,  ಅನೈತಿಕ ಸಂಬಂಧದಿಂದ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜೆ.ಪಿ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: couple - killed – park-Bangalore

Tags :

.