For the best experience, open
https://m.justkannada.in
on your mobile browser.

ಕೋವಿಡ್ ಹಗರಣ ವರದಿ ಸಲ್ಲಿಕೆ: ರಾಜೀನಾಮೆ ಕೊಡಬೇಕಾಗುತ್ತೆ ಎಂದು ಪಿತೂರಿ-ಬಿವೈ ವಿಜಯೇಂದ್ರ ಟೀಕೆ

01:47 PM Sep 06, 2024 IST | prashanth
ಕೋವಿಡ್ ಹಗರಣ ವರದಿ ಸಲ್ಲಿಕೆ  ರಾಜೀನಾಮೆ ಕೊಡಬೇಕಾಗುತ್ತೆ ಎಂದು ಪಿತೂರಿ ಬಿವೈ ವಿಜಯೇಂದ್ರ ಟೀಕೆ

ಬೆಂಗಳೂರು,ಸೆಪ್ಟಂಬರ್,6,2024 (www.justkannada.in): ಕೋವಿಡ್ ಹಗರಣ ಕುರಿತ ವರದಿಯನ್ನ ಸಲ್ಲಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದೊಂದು ಪಿತೂರಿ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಬೆದರಿಕೆಗಳು ಕುತಂತ್ರಗಳಿಗೆ ನಾವು ಭಯ ಪಡಲ್ಲ, ಮುಡಾ  ಮತ್ತು ವಾಲ್ಮಿಕಿ ಹಗರಣ ವಿರುದ್ದ ಹೋರಾಟ ಮುಂದುವರೆಸುತ್ತೇವೆ. ಕಾಂಗ್ರೆಸ್ ನ ಪರಿಸ್ಥಿತಿ ಗೊತ್ತಾಗುತ್ತೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಪಿತೂರಿ ಮಾಡಿದ್ದಾರೆ ಎಂದು  ಸರ್ಕಾರದ ವಿರುದ್ದ ಕಿಡಿಕಾರಿದರು.

Key words: Covid scam, report, criticizes, BY Vijayendra,

Tags :

.