For the best experience, open
https://m.justkannada.in
on your mobile browser.

ಕೋವಿಡ್ ಭೀತಿ ಹಿನ್ನೆಲೆ: ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ತಪಾಸಣೆ.

10:25 AM Dec 19, 2023 IST | prashanth
ಕೋವಿಡ್ ಭೀತಿ ಹಿನ್ನೆಲೆ  ಕೇರಳ ಕರ್ನಾಟಕ ಗಡಿ ಭಾಗದಲ್ಲಿ ತಪಾಸಣೆ

ಮೈಸೂರು,ಡಿಸೆಂಬರ್,19,2023(www.justkannada.in): ಈಗಾಗಲೇ ಚಳಿಗಾಲ ಶುರುವಾಗಿದ್ದು ಈ ಮಧ್ಯೆ  ಪಕ್ಕದ ರಾಜ್ಯ ಕೇರಳದಲ್ಲಿ ಕೋವಿಡ್ ಹೆಚ್ಚಳವಾಗಿದೆ. ಈ  ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಕೊರೋನಾ ಭೀತಿ ಎದುರಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.

ಗಡಿ ಭಾಗದಲ್ಲಿ ಅಲರ್ಟ್ ಆಗಿದ್ದು ಕೇರಳ-ಕರ್ನಾಟಕ ಗಡಿ ಹೆಚ್.ಡಿ ಕೋಟೆ ತಾಲ್ಲೂಕಿನ ಬಾವಲಿ ಚೆಕ್ ಪೋಸ್ಟ್  ನಲ್ಲಿ ತಪಾಸಣೆ ಮಾಡಲಾಗುತ್ತಿದೆ.   ಹೆಚ್.ಡಿ ಕೋಟೆ ತಾಲ್ಲೂಕು ಆರೋಗ್ಯ ಇಲಾಖೆ ಸಿಬ್ಬಂದಿಯು  ವಾಹನ ಸವಾರರು ಮತ್ತು ಪ್ರಯಾಣಿಕರನ್ನ ತಪಾಸಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್ ಆತಂಕ ಹಿನ್ನೆಲೆ ಅಧಿಕಾರಿಗಳ ಜೊತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ದು,  60 ವರ್ಷ ಮೇಲ್ಪಟ್ಟವರು, ಕೊರೋನಾಗೆ ತುತ್ತಾಗಿರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಈಗಾಗಲೇ ಸೂಚಿಸಿದ್ದಾರೆ.

Key words: Covid scare- Inspection - Kerala-Karnataka -border.

Tags :

.