HomeBreaking NewsLatest NewsPoliticsSportsCrimeCinema

ತೈಲ ಬೆಲೆ ಏರಿಕೆ ಖಂಡಿಸಿ  ಸೈಕಲ್ ಜಾಥಾ: ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

10:35 AM Jun 20, 2024 IST | prashanth

ಬೆಂಗಳೂರು,ಜೂನ್,20,2024 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನ ಖಂಡಿಸಿ ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಸೈಕಲ್ ಜಾಥಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಸೈಕಲ್ ಜಾಥಾ ಮೂಲಕ ಪ್ರತಿಭಟನೆಗೆ ಮುಂದಾದರು. ಈ ವೇಳೆ ಜಾಥಾ ಪ್ರಾರಂಭವಾದ 500 ಮೀಟರ್ ದೂರದಲ್ಲೇ ಪೊಲೀಸರು ಬಿಜೆಪಿ ನಾಯಕರನ್ನ ಬಂಧಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ  ಬಿವೈ ವಿಜಯೇಂದ್ರ, ಶಾಸಕ ಅಶ್ವತ್ ನಾರಾಯಣ್, ಎಂಎಲ್ ಸಿ ಸಿಟಿ ರವಿ, ಛಲವಾದಿ ನಾರಾಯಣಸ್ವಾಮಿಯನ್ನ ಪೊಲೀಸರು ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಶಿಫ್ಟ್ ಮಾಡಿದರು.

ಇತ್ತೀಚೆಗೆ ರಾಜ್ಯ ಸರ್ಕಾರ 3 ರೂ ಪೆಟ್ರೋಲ್ ಬೆಲೆ ಹಾಗೂ 3.50 ರೂ. ಡೀಸೆಲ್ ಬೆಲೆಯನ್ನ ಏರಿಕೆ ಮಾಡಿದ್ದು ಇದರ ವಿರುದ್ದ ರಾಜ್ಯಾದ್ಯಂತ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Cycle jatha, condemning, hike, oil prices, BJP

Tags :
BJPCycle jatha -condemning – hikeOil Prices
Next Article