For the best experience, open
https://m.justkannada.in
on your mobile browser.

ಡಿ.ದೇವರಾಜ ಅರಸು ಬಗ್ಗೆ ಸ್ವಪಕ್ಷಿಯ ನಾಯಕನ ಹೇಳಿಕೆಗೆ ಹೆಚ್. ವಿಶ್ವನಾಥ್ ಕಿಡಿ

04:52 PM Sep 17, 2024 IST | prashanth
ಡಿ ದೇವರಾಜ ಅರಸು ಬಗ್ಗೆ ಸ್ವಪಕ್ಷಿಯ ನಾಯಕನ ಹೇಳಿಕೆಗೆ ಹೆಚ್  ವಿಶ್ವನಾಥ್ ಕಿಡಿ

ಬೆಂಗಳೂರು,ಸೆಪ್ಟಂಬರ್,17,2024 (www.justkannada.in): ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ದೇವರಾಜ್ ಅರಸು ಬಗ್ಗೆ ಮಾತನಾಡಿ ಲಿಂಗಾಯತರಿಗೆ ಅನ್ಯಾಯ ಮಾಡಿದ್ರು ಎಂದಿದ್ದಾರೆ. ವಿದೇಶದಲ್ಲಿ ಓದಿದ ಬೆಲ್ಲದ್ ರಿಗೆ ದೇವರಾಜ್ ಅರಸು ಬಗ್ಗೆ ಗೊತ್ತಿಲ್ಲ, ಓದಿಕೊಂಡಿಲ್ಲ ಎನಿಸುತ್ತದೆ. ಅರವಿಂದ ಬೆಲ್ಲದ್ ಅವರು ಕರ್ನಾಟಕದ ಇತಿಹಾಸವನ್ನ ಓದಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಹುಬ್ಬಳ್ಳಿಯಲ್ಲಿ ಸಾಕಷ್ಟು ಆಸ್ತಿಯನ್ನ ನೀವು ಹೊಂದಿದ್ದೀರಾ. ಬಡವರ ಕಷ್ಟ ನೋವು ನಿಮಗೆ ತಿಳಿದಿಲ್ಲ. ಲಿಂಗಾಯತರಿಗೆ ಅವರು ಮೀಸಲಾತಿ ನೀಡಲಿಲ್ಲ ಎಂದಿದ್ದೀರಾ. ಸಂವಿಧಾನ ಜಾರಿಗೆ ಬರುವ ಮುನ್ನವೇ ರಾಜಪ್ರಭುತ್ವದಲ್ಲಿ ಮೈಸೂರು ಮಹಾರಾಜರು ಮೀಸಲಾತಿ ನೀಡಿದ್ದಾರೆ. 3ಬಿ ನಲ್ಲಿ ಲಿಂಗಾಯತರಿಗೆ ಈಗಲೂ ಮೀಸಲಾತಿ ಇದೆ. ಲಿಂಗಾಯತರಲ್ಲಿ ಅನೇಕ ಬಡವರು ಇದ್ದಾರೆ. ದೇವರಾಜ್ ಅರಸು ರವರು ಯಾವುದೇ ಒಂದು ಜಾತಿ ಪರವಾಗಿ ಕೆಲಸ ಮಾಡಿಲ್ಲ ಎಂದು ಹೇಳಿವ ಮೂಲಕ ಸ್ವಪಕ್ಷಿಯ ನಾಯಕನ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ನಾಗಮಂಗಲ ಗಲಭೆ ಪ್ರಕರಣ: ಸಚಿವರ ವಿರುದ್ದ ವಾಗ್ದಾಳಿ

ನಾಗಮಂಗಲ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಈ ರೀತಿ ಆಗಬಾರದು ಜಿಲ್ಲಾ ಮಂತ್ರಿಗಳು ಸುಮ್ಮನೆ ಭಾಷಣ ಮಾಡ್ತಾರೆ ಅಷ್ಟೇ. ಜಿಲ್ಲೆಯ ಸೂಕ್ಷ್ಮತೆ ಅರ್ಥನೇ ಮಾಡಿಕೊಂಡಿಲ್ಲ ಅಂದ್ರೆ ಯಾವ ಸೀಮೆ ಮಂತ್ರಿ ನೀವು. ಎಲ್ಲರನ್ನ ಕರೆದು ಮೊದಲೇ ಶಾಂತಿ ಸಭೆ ಮಾಡಬಹುದಿತ್ತು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಾನು ಸಿದ್ದರಾಮಯ್ಯಗೆ ವಿನಂತಿ ಮಾಡ್ತೀನಿ. ಕಾಂತರಾಜು ವರದಿ ಹೊರಗಡೆ ಬರ್ಲಿಲ್ಲ. ಅಹಿಂದ ಅಂತೀರಾ ಕಾಂತರಾಜು ವರದಿ ಜನಕ್ಕೆ ತಿಳಿದುಕೊಳ್ಳಲು ಬಿಡಲಿಲ್ಲ ನೀವು. ಈ ಕಡೆ ಬಂದಾಗ ಬಸವಣ್ಣ ಆ ಕಡೆ ಹೋದಾಗ ರಾಯಣ್ಣ ಅಂಬೇಡ್ಕರ್, ಬರೀ ಭಾಷಣಕ್ಕೆ ಸೀಮಿತ ಆಗೋದ್ರಿ ಸಿದ್ದರಾಮಯ್ಯ. ಸಿದ್ದರಾಮಯ್ಯ ಮೊದಲನೇ ಅವಧಿಯಲ್ಲಿ ಶೋಷಿತರ ಧ್ವನಿ ಆಗಿದ್ರು. ಎರಡನೇ ಅವಧಿಯಲ್ಲಿ ಭ್ರಷ್ಟರ ಧ್ವನಿ ಆಗ್ತಿದ್ದಾರೆ. ನಾವು ಸಿದ್ದರಾಮಯ್ಯ ಈ ರೀತಿ ಮಾಡ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮುನಿರತ್ನ ನಮ್ಮ ಬಿಜೆಪಿ ಶಾಸಕರು. ಅವರು ನಮ್ಮ ಜೊತೇನೆ ಬಂದಿದ್ದವರು. ಕಾಂಗ್ರೆಸ್ ತೊರೆದು ಯಡಿಯೂರಪ್ಪ ಸಿಎಂ ಮಾಡಲು ನಮ್ಮ ಜೊತೆ ಬಂದಿದ್ದರು. ಯಡಿಯೂರಪ್ಪ ಅವರನ್ನು ಮಂತ್ರಿ ಕೂಡ ಮಾಡಿದ್ದರು. ಮುನಿರತ್ನನ್ನ ಸಿ.ಟಿ ರವಿ, ಅಶ್ವತ್ ನಾರಾಯಣ್ ಡಿಫೆಂಡ್ ಮಾಡಬಾರದು. ಎರಡು ದಿನ ಜೈಲಲ್ಲಿ ಇರಲಿ ಜಾತಿ ನಿಂದನೆ ಮಾಡೋದು ಅಂದ್ರೆ ಏನು ಅರ್ಥ ಎಂದು  ಶಾಸಕ ಮುನಿರತ್ನ ಹೇಳಿಕೆ ಖಂಡಿಸಿದರು.

Key words: D. Devaraja Arasu, statement, Arvind Bellad, H. Vishwanath

Tags :

.