For the best experience, open
https://m.justkannada.in
on your mobile browser.

ಡಿ.ಕೆ ಶಿವಕುಮಾರ್ ಮಾತಿಗೆ ಬೆಲೆ ಕೊಡಬೇಕಾ? ಸಿಎಂ ಬಗ್ಗೆ ಜನ ತೀರ್ಮಾನ ಮಾಡ್ತಾರೆ- ಹೆಚ್ ಡಿಕೆ ಟಾಂಗ್

12:19 PM Jul 28, 2024 IST | prashanth
ಡಿ ಕೆ ಶಿವಕುಮಾರ್ ಮಾತಿಗೆ ಬೆಲೆ ಕೊಡಬೇಕಾ  ಸಿಎಂ ಬಗ್ಗೆ ಜನ ತೀರ್ಮಾನ ಮಾಡ್ತಾರೆ  ಹೆಚ್ ಡಿಕೆ ಟಾಂಗ್

ಮೈಸೂರು,ಜುಲೈ,28,2024 (www.justkannada.in): ಹೆಚ್.ಡಿ ಕುಮಾರಸ್ವಾಮಿ ಮುಂದೆ ಸಿಎಂ ಆಗಲ್ಲ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ನಂಜನಗೂಡಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಡಿಸಿಎಂ ಡಿಕೆ ಶಿವಕುಮಾರ್ ಮಾತಿಗೆ ಬೆಲೆ ಕೊಡಬೇಕಾ..?  ಸಿಎಂ ಬಗ್ಗೆ ಜನ ತೀರ್ಮಾನ ಮಾಡ್ತಾರೆ. ಸಿಎಂ ಆಗುವುದು  ಡಿಕೆಶಿ ಅವರ ಕೈಯಲ್ಲಿ ಇದೆಯಾ?  ಕೆಲವರು ಅವರಪ್ಪನಾಣೆ ಗೆಲ್ಲಲ್ಲ ಎಂದಿದ್ದರ.  ಜೆಡಿಎಸ್ ಸರ್ವನಾಶ ಆಗತ್ತೆ ಎಂದಿದ್ದರು. ನಾನು ಸಿಎಂ ಆಗಿದ್ದೆ. ಈಗ ಕೇಂದ್ರ ಮಂತ್ರಿಯೂ ಆಗಿದ್ದೇನೆ. ದುರಂಹಕಾರದ ಮಾತುಗಳಿಂದ ಅವರ ಸ್ಥಿತಿ ಏನಾಗುತ್ತೆ ನೋಡಿ ಎಂದು ಟಾಂಗ್ ಕೊಟ್ಟರು.

ನಂಜನಗೂಡು ಪ್ರವಾಸಿ ಮಂದಿರದ ಬೀಗ ತೆಗೆಯದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿಕೆ,  ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತೆ.  ನಿಗದಿತ ಕಾರ್ಯಕ್ರಮ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.  ನನ್ನ ಮತ್ತು ಜನರು ನಡುವಿನ ಅಂತರ ಮಾಡಲು ಸಾಧ್ಯವಲ್ಲ. ನಾನು ಜನರ ಜೊತೆಯಲ್ಲೇ ಇದ್ದೇನೆ ಎಂದರು.

Key words:  DK Shivakumar, People, decide, CM, HDK

Tags :

.