For the best experience, open
https://m.justkannada.in
on your mobile browser.

ಪ್ರತ್ಯೇಕ ದೇಶ ಕೂಗು ಕುರಿತು ಡಿ.ಕೆ ಸುರೇಶ್ ಹೇಳಿಕೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೇಸರ.

10:26 AM Feb 02, 2024 IST | prashanth
ಪ್ರತ್ಯೇಕ ದೇಶ ಕೂಗು ಕುರಿತು ಡಿ ಕೆ ಸುರೇಶ್ ಹೇಳಿಕೆ  ಗೃಹ ಸಚಿವ ಡಾ ಜಿ ಪರಮೇಶ್ವರ್ ಬೇಸರ

ಬೆಂಗಳೂರು,ಫೆಬ್ರವರಿ,2,2024(www.justkannada.in): ಪ್ರತ್ಯೇಕ ದೇಶ ಕೂಗು ಕುರಿತು ಸಂಸದ ಡಿ.ಕೆ ಸುರೇಶ್ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಾ.ಜಿ.ಪರಮೇಶ್ವರ್, ದೇಶ ಒಗ್ಗೂಡಿಸಬೇಕೆ ವಿನಹ ಒಡೆಯಬಾರದು ದೇಶಕ್ಕಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ. ಡಿ.ಕೆ ಸುರೇಶ್ ಯಾಕೆ ಹೀಗೆ ಹೇಳಿದರು ಗೊತ್ತಿಲ್ಲ ಪಾಕ್ ವಿಭಜನೆಯಾದಾಗ ನಾವು ಹುಟ್ಟಿರಲಿಲ್ಲ. ಚರಿತ್ರೆ ನೋಡಿದಾಗ ನೋವಾಗುತ್ತದೆ. ನಾವು ಒಂದು ರಾಷ್ಟ್ರ ಎಂಬ ನಂಬಿಕೆ ಇಟ್ಟವರು.  ಗಾಂಧಿ ಸೇರಿ ಹಲವರು ದೇಶಕ್ಕಾಗಿ ಹೋರಾಡಿದ್ದಾರೆ ಎಂದು ತಿಳಿಸಿದರು.

ನಿನ್ನೆ ಲೋಕಸಭೆ ಚುನಾವಣೆ ವಿಚಾರವಾಗಿ ಚರ್ಚೆ ಮಾಡಿದ್ದೇವೆ.  ಚುನಾವಣೆ ದೃಷ್ಠಿಯಿಂದ ಚರ್ಚೆ  ಮಾಡಿದ್ದೇವೆ. ಚುನಾವಣೆ ಹಿನ್ನೆಲೆ  ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಯಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

Key words: DK Suresh- statement - separate country- Home Minister -Dr. G. Parameshwar

Tags :

.