HomeBreaking NewsLatest NewsPoliticsSportsCrimeCinema

ಎಸ್ ಐಟಿ ತನಿಖೆ ವೇಳೆಯೇ ಇಡಿ ದಾಳಿ: ಯಾವುದೋ ಒತ್ತಡದಲ್ಲಿ ಕೆಲಸ ಮಾಡಬಾರದು- ಸಚಿವ ಎಂ.ಬಿ ಪಾಟೀಲ್

01:52 PM Jul 10, 2024 IST | prashanth

ಬೆಂಗಳೂರು,ಜುಲೈ,10,2024 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ಹಗರಣ ಕುರಿತು ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆ ಮೇಲೆ ಇಡಿ ದಾಳಿಗೆ ಸಂಬಂಧಿಸಿದಂತೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಎಸ್ ಐಟಿ ತನಿಖೆ ನಡೆಯುತ್ತಿರುವಾಗಲೇ ಇಡಿ ದಾಳಿ ನಡೆಸಿದೆ.  ಅಂತರಾಜ್ಯ ಹಣಕಾಸು ವರ್ಗಾವಣೆ ಕಾರಣಕ್ಕೆ ದಾಳಿ ಮಡಿರಬಹುದು. ಯಾವುದೋ ಒತ್ತಡದಲ್ಲಿ ಇಡಿ ಕೆಲಸ ಮಾಡಬಾರದು . ಕಾನೂನು ತನ್ನದೇ ಆದ ಕ್ರಮಗಳನ್ನ ತೆಗೆದುಕೊಳ್ಳುತ್ತದೆ ಎಂದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಒತ್ತಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್, ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ ಪಾತ್ರ ಏನಿದೆ?  ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಕಾಲದಲ್ಲಿ ಎಷ್ಟು ಹಗರಣ ಸಿಬಿಐಗೆ ಕೊಟ್ಟಿದ್ದಾರೆ. ಈಗ ಯಾಕೆ ಒತ್ತಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Key words: ED raid, SIT, investigation, Minister, MB Patil

Tags :
ED raidinvestigationMB patilministersit
Next Article