For the best experience, open
https://m.justkannada.in
on your mobile browser.

ವಿದ್ಯುತ್ ತಂತಿ ತುಂಡಾಗಿ ಶಾಕ್‌ನಿಂದ ರೈತ ಸಾವು

05:35 PM Jul 24, 2024 IST | prashanth
ವಿದ್ಯುತ್ ತಂತಿ ತುಂಡಾಗಿ ಶಾಕ್‌ನಿಂದ ರೈತ ಸಾವು

ಮೈಸೂರು,ಜುಲೈ,24,2024 (www.justkannada.in): ವಿದ್ಯುತ್ ತಂತಿ ತುಂಡಾಗಿ ಶಾಕ್‌ನಿಂದ ರೈತ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕು ಕನ್ನಾಯಕ‌ನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಿಂಗೇಗೌಡ (60) ವಿದ್ಯುತ್ ಶಾಕ್ ನಿಂದ  ಸಾವನ್ನಪ್ಪಿದ ರೈತ. ನಿಂಗೇಗೌಡ ಜಮೀನಿಗೆ ನಡೆದುಕೊಂಡು ಹೋಗುವಾಗ ಈ ಅವಘಡ ಸಂಭವಿಸಿದೆ.  ಇದ್ದಕ್ಕಿದಂತೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಸ್ಥಳಕ್ಕೆ ಬಾರದ ಚೆಸ್ಕಾಂ ಸಿಬ್ಬಂದಿ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Farmer, dies, electric, shock

Tags :

.