HomeBreaking NewsLatest NewsPoliticsSportsCrimeCinema

ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್.  

03:27 PM Dec 22, 2023 IST | prashanth

ಹುಬ್ಬಳ್ಳಿ,ಡಿಸೆಂಬರ್,22,2023(www.justkannada.in): ಧಾರವಾಡ ಲೋಕಸಭಾ ಕ್ಷೇತ್ರದಿಂದ  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧಿಸಲಿದ್ದಾರೆ ಎಂಬ ವಿಚಾರ ಹಬ್ಬಿದ್ದು ಈ ಬಗ್ಗೆ ಸ್ವತಃ ಜಗದೀಶ್ ಶೆಟ್ಟರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸಿಎಂ ಸಮ್ಮುಖದಲ್ಲೇ  ನಾನು ಚುನಾವಣೆಗೆ ನಿಲ್ಲಲ್ಲ ಎಂದಿದ್ದೇನೆ. ಕಾಂಗ್ರೆಸ್ ನಿಂದ ಯಾರನ್ನೇ ಕಣಕ್ಕಿಳಿಸಿದರೂ ಫೈ ಟ್ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಲು ಶ್ರಮಿಸುತ್ತೇನೆ. ಲೋಸಕಭೆ ಚುನಾವಣೆಗೂ ನನ್ನ ದೆಹಲಿ ಭೇಟಿಗೂ ಸಂಬಂಧವಿಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಆಕಾಂಕ್ಷಿಗಳ ಶಾರ್ಟ್ ಲೀಸ್ಟ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಅಭ್ಯರ್ಥಿ ಆಯ್ಕೆ ಸಂಬಂಧ ಮೊನ್ನೆಯಷ್ಟೆ ವೀಕ್ಷಕರ ಸಭೆ ನಡೆಸಿದ್ದಾರೆ.  ಇದರ ನಡುವೆಯೇ ನನ್ನ ಹೆಸರು ಕಳಿಸಿದ್ದಾರೆ ಎನ್ನುತ್ತಿದ್ದೀರಿ. ಆದರೆ ಸಿಎಂ ಸಮ್ಮುಖದಲ್ಲೇ ನಾನು ಸ್ಪರ್ಧೆ ಮಾಡಲ್ಲ ಎಂದಿದ್ದೇನೆ ಎಂದರು.

Key words: Former CM -Jagadish Shettar- clarified - contest - Dharwad Lok Sabha -constituency.

Tags :
constituencyDharwad Lok SabhaFormer CM -Jagadish Shettar- clarified - contest
Next Article