For the best experience, open
https://m.justkannada.in
on your mobile browser.

ಕೇಂದ್ರದ ಕೈಗೊಂಬೆ ರಾಜ್ಯಪಾಲರ ವಿರುದ್ದ ‘Go back’ ಅಭಿಯಾನ- ಡಾ.ಪುಷ್ಪಾ ಅಮರನಾಥ್

01:10 PM Aug 17, 2024 IST | prashanth
ಕೇಂದ್ರದ ಕೈಗೊಂಬೆ ರಾಜ್ಯಪಾಲರ ವಿರುದ್ದ ‘go back’ ಅಭಿಯಾನ  ಡಾ ಪುಷ್ಪಾ ಅಮರನಾಥ್

ಮೈಸೂರು,ಆಗಸ್ಟ್,17,2024 (www.justkannada.in): ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ  ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ರಾಜ್ಯಪಾಲರ ವಿರುದ್ದ ಗೋ ಬ್ಯಾಕ್ ಅಭಿಯಾನಕ್ಕೆ ಮುಂದಾಗಿರುವುದಾಗಿ ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಡಾ.ಪುಷ್ಪಾ ಅಮರನಾಥ್ , ದುರುದ್ದೇಶದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮ್ಯ ನವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿಯನ್ನು ಕೊಟ್ಟಿರುವುದು ರಾಜಕೀಯ ಷಡ್ಯಂತ್ರ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರ ನಿರ್ಧಾರಕ್ಕೆ ಧಿಕ್ಕಾರ. ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಅಲ್ಲದೆ ನಾನು ಸಿದ್ಧರಾಮಯ್ಯ ಪರ. Go back governor (ಗೋ ಬ್ಯಾಕ್ ಗವರ್ನರ್) ಅಭಿಯಾನ ಆರಂಭಿಸಿರುವುದಾಗಿ ಡಾ.ಪುಷ್ಪಾ ಅಮರನಾಥ ತಿಳಿಸಿದ್ದಾರೆ.

Key words:  Go back, campaign, against, governor, Dr. Pushpa Amarnath

Tags :

.