For the best experience, open
https://m.justkannada.in
on your mobile browser.

ಬರ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಮತ್ತೆ ಏಳು ತಾಲೂಕುಗಳ ಸೇರ್ಪಡೆಗೊಳಿಸಿದ ಸರ್ಕಾರ.

05:23 PM Nov 04, 2023 IST | prashanth
ಬರ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಮತ್ತೆ ಏಳು ತಾಲೂಕುಗಳ ಸೇರ್ಪಡೆಗೊಳಿಸಿದ ಸರ್ಕಾರ

ಬೆಂಗಳೂರು,ನವೆಂಬರ್,4,2023(www.justkannada.in):  ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಬರ ಪರಿಸ್ಥಿತಿ ತಾಂಡವಾಡುತ್ತಿದ್ದು ಈಗಾಗಲೇ 200ಕ್ಕೂ ಹೆಚ್ಚು ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ನಡುವೆ ಇದೀಗ ಮತ್ತೆ ಏಳು ತಾಲೂಕುಗಳನ್ನ ಪಟ್ಟಿದೆ ಸೇರ್ಪಡೆಗೊಳಿಸಲಾಗಿದೆ.

ಬೀದರ್ ಜಿಲ್ಲೆಯ ಔರಾದ್, ಬೀದರ್, ಚಿಟಗುಪ್ಪಾ, ಹುಮ್ನಾಬಾದ್, ಕಮಲನಗರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು, ವಿಜಯಪುರ ಜಿಲ್ಲೆಯ ತಿಕೋಟಾವನ್ನು ಪರ ತಾಲ್ಲೂಕುಗಳ ಪಟ್ಟಿಗೆ ಸೇರಿಸಿ ಕಂದಾಯ‌ ಇಲಾಖೆಯಿಂದ ಆದೇಶಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: government –added- seven - taluks - list of drought-affected- taluks.

Tags :

.