HomeBreaking NewsLatest NewsPoliticsSportsCrimeCinema

ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ.

06:29 PM May 31, 2024 IST | prashanth

ಹಾಸನ ,ಮೇ,31,2024 (www.justkannada.in):  ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೇಲೂರು ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೀಕ್ಷಿತ್ (10) ನಿತ್ಯಶ್ರೀ (12) ಕುಸುಮ (6) ಮೃತ ಪಟ್ಟ ಮಕ್ಕಳು. ಹಸುಗಳನ್ನು ಕೆರೆ ಬಳಿ ಕಟ್ಟಿ ಆಟ ಆಡುತ್ತಿದ್ದ ವೇಳೆ ದುರಂತ ಸಂಭವಿಸಿದೆ ಎನ್ನಲಾಗಿದೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಹಳೇಬೀಡು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯರು ಕೆರೆಯಿಂದ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ.

Key words: Hassan, Three children, lake, death

Tags :
deathHassan-Three children- drownedlake.
Next Article