HomeBreaking NewsLatest NewsPoliticsSportsCrimeCinema

ಕೇಂದ್ರ ಬಜೆಟ್ ವಿರೋಧಿಸಿ ಇಂಡಿಯಾ ಕೂಟ ಧರಣಿ

11:36 AM Jul 24, 2024 IST | prashanth

ನವದೆಹಲಿ,ಜುಲೈ,24,2024 (www.justkannada.in): ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ವಿರೋಧಿಸಿ ಇಂದು ಇಂಡಿಯಾ ಕೂಟದ ನಾಯಕರು ಪ್ರತಿಭಟನೆ ನಡೆಸಿದರು.

ಸಂಸತ್ ಭವನದ ಮುಂದೆ ಇಂಡಿಯಾ ಕೂಟದ ನಾಯಕರು, ಸಂಸದರು ಧರಣಿ ನಡೆಸಿದ್ದು, ರೈತ ವಿರೋಧಿ, ಜನ ವಿರೋಧಿ ಬಜೆಟ್, ಬಿಜೆಪಿ ಕುರ್ಚಿ ಬಚಾವೋ  ಬಜೆಟ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿ ಇಂಡಿಯಾ ಕೂಟದ ಸಂಸದರು ಭಾಗವಹಿಸಿದ್ದರು.

Key words: India, congress, protest, against, central budget

Tags :
againstCentral BudgetcongressIndiaprotest
Next Article