HomeBreaking NewsLatest NewsPoliticsSportsCrimeCinema

ಶೀಘ್ರದಲ್ಲೇ ಕಬಿನಿ ಜಲಾಶಯ ಅಣೆಕಟ್ಟು ದುರಸ್ತಿ: ಉದ್ಯಾನವನ ನಿರ್ಮಾಣ- ಶಾಸಕ ಅನಿಲ್ ಚಿಕ್ಕಮಾದು

12:58 PM Aug 24, 2024 IST | prashanth

ಮೈಸೂರು,ಆಗಸ್ಟ್,24,2024 (www.justkannada.in): ಕಬಿನಿ ಜಲಾಶಯದಲ್ಲಿ ಬಿರುಕು ಉಂಟಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಶೀಘ್ರದಲ್ಲೇ ಅಣೆಕಟ್ಟು ದುರಸ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು,  ಸುಮಾರು 6ಕೋಟಿ ವೆಚ್ಚದಲ್ಲಿ ಜಲಾಶಯ ಆಣೆಕಟ್ಟು ದುರಸ್ತಿ ಮಾಡಲಾಗುತ್ತದೆ. ಈ ಬಗ್ಗೆ ಜಲ ಸಂಪನ್ಮೂಲ ಸಚಿವರು ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಆಣೆಕಟ್ಟು ದುರಸ್ತಿ ಕಾರ್ಯಕ್ರಮ ನಡೆಯಲಿದೆ. ಕೆಆರ್ ಎಸ್ ಜಲಾಶಯ ಮಾದರಿಯೆಲ್ಲೆ ಕಬಿನಿ ಜಲಾಶಯ ಬಳಿ ಉದ್ಯಾನವನ ನಿರ್ಮಿಸಲಾಗುವುದು. ಇದಕ್ಕೆ 30ಕೋಟಿ ರೂ. ಅಂದಾಜು ಪಟ್ಟಿ ಸಿದ್ದಪಡಿಸಲಾಗಿದೆ. ಶೀಘ್ರದಲ್ಲೇ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಹೆಚ್ ಡಿ ಕೋಟೆ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಮೂರು ಜಲಾಶಯಗಳು ಇವೆ, ಅಭಯಾರಣ್ಯ ಇದೆ, ಪ್ರಾಕೃತಿಕ ಸಂಪತ್ತು ಅಪಾರವಾಗಿದೆ. ಹಾಗಾಗಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

Key words: Kabini Dam, Repair, Soon, MLA, Anil Chikkamadu

Tags :
anil chikkamadukabini damMLARepairsoon
Next Article