For the best experience, open
https://m.justkannada.in
on your mobile browser.

ಕೇರಳದಲ್ಲಿ ಭೂ ಕುಸಿತ: ಮೃತರ ಸಂಖ್ಯೆ 156ಕ್ಕೆ ಏರಿಕೆ

10:30 AM Jul 31, 2024 IST | prashanth
ಕೇರಳದಲ್ಲಿ ಭೂ ಕುಸಿತ  ಮೃತರ ಸಂಖ್ಯೆ 156ಕ್ಕೆ ಏರಿಕೆ

ವಯನಾಡು,ಜುಲೈ,31,2024 (www.justkannada.in): ಭಾರಿ ಮಳೆಯಿಂದಾಗಿ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 156ಕ್ಕೆ ಏರಿಕೆಯಾಗಿದೆ.

ಭೂಕುಸಿತದಿಂದಾಗಿ 98 ಜನ ನಾಪತ್ತೆಯಾಗಿದ್ದು,  481ರನ್ನ ರಕ್ಷಣೆ ಮಾಡಲಾಗಿದೆ.   ಕಾಳಜಿ ಕೇಂದ್ರದಲ್ಲಿ 3068 ಜನರು ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು  ಬೆಂಗಳೂರಿನಿಂದ ಕೇರಳಗೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೆಲ ಜಿಲ್ಲೆಗಳಿಗೆ ಮಾತ್ರ ಬಸ್ ಸಂಚಾರ ನಡೆಸುತ್ತಿದೆ. ಕಣ್ಣೂರು, ವಡಗಾರ, ತಲಚೇರಿ, ಕೊಯಕ್ಕಡ್ ಜಿಲ್ಲೆಗಳಿಗೆ ಮಾತ್ರ ಬಸ್ ಸಂಚಾರವಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Landslides, Kerala, Death, 156 people

Tags :

.