For the best experience, open
https://m.justkannada.in
on your mobile browser.

ಕೇಂದ್ರ ಸಚಿವ ಹೆಚ್.ಡಿಕೆ ಎದುರೇ ‘ಕೈ’ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ

12:36 PM Aug 28, 2024 IST | prashanth
ಕೇಂದ್ರ ಸಚಿವ ಹೆಚ್ ಡಿಕೆ ಎದುರೇ ‘ಕೈ’ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ

ಮಂಡ್ಯ,ಆಗಸ್ಟ್,28,2024 (www.justkannada.in): ಮಂಡ್ಯ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು ಈ ಮಧ್ಯೆ   ವಾಹನ ಬಿಡದ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದ ನಗರಸಭೆ ಕಚೇರಿಯ ಮುಂಭಾಗ ಭಾರೀ ಹೈಡ್ರಾಮಾ  ನಡೆದಿದೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಎದುರಲ್ಲೇ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ವಾಗ್ವಾದ ನಡೆದು ಹೈಡ್ರಾಮಾ ಸೃಷ್ಠಿಯಾಗಿದೆ. ಇಂದು ಮಂಡ್ಯ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ಈ ವೇಳೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮತ್ತು  ಜೆಡಿಎಸ್ ಸದಸ್ಯರ ವಾಹನವನ್ನು ಮಾತ್ರ ನಗರಸಭೆ ಆವರಣದೊಳಗೆ ಬಿಡಲಾಗುತ್ತಿದೆ. ಆದರೆ ಕಾಂಗ್ರೆಸ್ ಸದಸ್ಯರಿರುವ ವಾಹನವನ್ನು ಪೊಲೀಸರು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.

ಈ ವೇಳೆ ಕೇಂದ್ರ ಸಚಿವರ ಎದರೇ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು ತಳ್ಳಾಟ ನೂಕಾಟ ನಡೆದಿದೆ ಎನ್ನಲಾಗಿದೆ. ಇನ್ನು ಮಂಡ್ಯ ನಗರಸಭೆ ಅಧಿಕಾರಕ್ಕಾಗಿ ಜೆಡಿಎಸ್ –ಕಾಂಗ್ರೆಸ್ ನಡುವೆ ಪೈಪೋಟಿ ಜೋರಾಗಿದ್ದು ಜೆಡಿಎಸ್ ನ ಇಬ್ಬರು ಸದಸ್ಯರನ್ನ ಕಾಂಗ್ರೆಸ್ ಅಪರೇಷನ್ ಹಸ್ತದ ಮೂಲಕ ಸೆಳೆದಿದ್ದಾರೆ. ಹಾಗೆಯೇ ಜೆಡಿಎಸ್ ಕೂಡ ರಿವರ್ಸ್ ಆಪರೇಷನ್ ಮಾಡಿ ಕಾಂಗ್ರೆಸ್ ನ ಓರ್ವ ಸದಸ್ಯನನ್ನ ಸೆಳೆದಿದೆ ಎನ್ನಲಾಗಿದೆ.

Key words: mandya congress, JDS workers, Fight, Union Minister, HDK

Tags :

.