For the best experience, open
https://m.justkannada.in
on your mobile browser.

ತವರಲ್ಲೇ ಸಚಿವ ಹೆಚ್.ಸಿ ಮಹದೇವಪ್ಪಗೆ ಮುಖಭಂಗ: ಬನ್ನೂರು ಪುರಸಭೆ ಜೆಡಿಎಸ್ ಪಾಲು

02:53 PM Sep 06, 2024 IST | prashanth
ತವರಲ್ಲೇ ಸಚಿವ ಹೆಚ್ ಸಿ ಮಹದೇವಪ್ಪಗೆ ಮುಖಭಂಗ  ಬನ್ನೂರು ಪುರಸಭೆ ಜೆಡಿಎಸ್ ಪಾಲು

ಮೈಸೂರು,ಸೆಪ್ಟಂಬರ್,6,2024 (www.justkannada.in): ಮೈಸೂರು ಜಿಲ್ಲೆ ಟಿ.ನರಸೀಪುರ ಕ್ಷೇತ್ರಕ್ಕೆ ಸೇರಿರುವ ಬನ್ನೂರು ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿದಿದ್ದು ಈ ಮೂಲಕ ಸಚಿವ ಹೆಚ್ ಸಿ ಮಹದೇವಪ್ಪಗೆ ತವರಿನಲ್ಲೇ ತೀವ್ರ ಮುಖಭಂಗವಾಗಿದೆ.

ಇಂದು  ಬನ್ನೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಜೆಡಿಎಸ್ ಕೃಷ್ಣೆಗೌಡ, ಉಪಾಧ್ಯಕ್ಷರಾಗಿ ಬಿಜೆಪಿಯ ನಾಗರತ್ನ ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ಬನ್ನೂರು ಪುರಸಭೆ ಅಧಿಕಾರ ಹಿಡಿಯುವಲ್ಲಿ ಮೈತ್ರಿ ನಾಯಕರು ಸಕ್ಸಸ್ ಆಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭ ಕೋರಿದ್ದಾರೆ.  ಈ ವೇಳೆ ಮಾಜಿ ಶಾಸಕ ಅಶ್ವಿನ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: Minister, HC Mahadevappa, Bannur Municipality, JDS, Power

Tags :

.