For the best experience, open
https://m.justkannada.in
on your mobile browser.

ಪಕ್ಷದ ವರಿಷ್ಠರ ನನ್ನ ಭೇಟಿ ಫಲಪ್ರದ, ನಾನು ಗೆದ್ದಿದ್ದೇನೆ ಎಂದ ಶಾಸಕ ಯತ್ನಾಳ್.

03:34 PM Jan 08, 2024 IST | prashanth
ಪಕ್ಷದ ವರಿಷ್ಠರ ನನ್ನ ಭೇಟಿ ಫಲಪ್ರದ  ನಾನು ಗೆದ್ದಿದ್ದೇನೆ ಎಂದ ಶಾಸಕ ಯತ್ನಾಳ್

ವಿಜಯಪುರ,ಜನವರಿ,8,2024(www.justkannada.in): ಪಕ್ಷದ ವರಿಷ್ಠರ ನನ್ನ ಭೇಟಿ ಫಲಪ್ರದವಾಗಿದ್ದು ನಾನು ಗೆದ್ದಿದ್ದೇನೆ. ಎ‍ಲ್ಲಾ ವಿಚಾರಗಳನ್ನ ವರಿಷ್ಠರ ಮುಂದೆ ಹೇಳಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ನವದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿದ ವಿಚಾರ ಕುರಿತು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,   ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿ ಮಾಡಿದ್ದೇನೆ. 25 ನಿಮಿಷ ಚರ್ಚೆ ಮಾಡಿದ್ದೇನೆ.  ಏನು ಹೇಳಬೇಕಿತ್ತು ಅದನ್ನ ಹೇಳಿದ್ದೇನೆ  40 ಸಾವಿರ ಕೋಟಿ ಭ್ರಷ್ಟಾಚಾರದ ಬಗ್ಗೆ, ಅಡ್ಜೆಸ್ಟ್ ಮೆಂಟ್ ರಾಜಕಾರಣದ, ರಾಜ್ಯ ರಾಜಕಾರಣದ  ಬಗ್ಗೆ ತಿಳಿಸಿದ್ದೇನೆ. ಎಲ್ಲಾ ವಿಚಾರಗಳನ್ನು ವರಿಷ್ಟರ ಮುಂದೆ ಹೇಳಿದ್ದೇನೆ. ನನ್ನ ಭೇಟಿ ಫಲಪ್ರದವಾಗಿದೆ  ಎಂದರು.

ನನ್ನ ಬಗ್ಗೆ ಹೈಕಮಾಂಡ್ ಗೆ ಗೌರವವಿದೆ  ಅಸಮಾಧಾನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಗೆ ಸೂಚನೆ ನೀಡಿದ್ದಾರೆ.  ನಾನು ಗೆದ್ದಿದ್ದೇನೆ  ಎಂದು ಯತ್ನಾಳ್ ತಿಳಿಸಿದರು.

ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಬಿಎಸ್ ವೈ ವಿರೋಧವಿತ್ತು. ಬಿಎಸ್ ವೈರಿಂದ ನಾನು ಯಾವುದೇ ಉಪಕಾರ ಪಡೆದಿಲ್ಲ ಎಂದು ಯತ್ನಾಳ್ ತಿಳಿಸಿದರು.

Key words: MLA –Basanagowda patil Yatnal - meet-BJP-party leaders

Tags :

.