For the best experience, open
https://m.justkannada.in
on your mobile browser.

ಮುಡಾ ಕೇಸ್:  ಕೋರ್ಟ್ ತೀರ್ಮಾನ ಬಳಿಕ ರಾಷ್ಟ್ರಪತಿ ಭೇಟಿ ಬಗ್ಗೆ ನಿರ್ಧಾರ- ಗೃಹ ಸಚಿವ ಪರಮೇಶ್ವರ್

11:01 AM Aug 28, 2024 IST | prashanth
ಮುಡಾ ಕೇಸ್   ಕೋರ್ಟ್ ತೀರ್ಮಾನ ಬಳಿಕ ರಾಷ್ಟ್ರಪತಿ ಭೇಟಿ ಬಗ್ಗೆ ನಿರ್ಧಾರ  ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಆಗಸ್ಟ್,28,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವ ತೀರ್ಮಾನ ಬರುತ್ತೆ ನೋಡಬೇಕು. ನಂತರ ರಾಷ್ಟ್ರಪತಿ ಭೇಟಿ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಾ. ಜಿ.ಪರಮೇಶ್ವರ್, ಆಗಸ್ಟ್31 ರಂದು ಪಕ್ಷದ ವತಿಯಿಂದ ಪ್ರತಿಭಟನೆ ಮಾಡುತ್ತೇವೆ. ಶಾಸಕರೆಲ್ಲರೂ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಕೊಡುತ್ತೇವೆ. ನಾವು ರಾಷ್ಟ್ರ ಮಟಡ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ. ನ್ಯಾಯಾಲಯದಲ್ಲಿ ಯಾವ ತೀರ್ಮಾನ ಬರುತ್ತೆ ನೋಡಬೇಕು ಆ ನಂತರ ರಾಷ್ಟ್ರಪತಿ ಭೇಟಿ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ಮತ್ತೆ ಧರಣಿಗೆ ಮುಂದಾಗಿದ್ದು ಆಗಸ್ಟ್ 31 ರಂದು ರಾಜಭವನ ಚಲೋಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ. ಇನ್ನು ಮುಡಾ ಹಗರಣ ಸಂಬಂಧ ನಾಳೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

Key words: Muda Case, court decision, Home Minister, Parameshwar

Tags :

.