HomeBreaking NewsLatest NewsPoliticsSportsCrimeCinema

ಮುಡಾ ಹಗರಣ: ನ್ಯಾಯಾಂಗ ತನಿಖೆ ಒಪ್ಪಲ್ಲ, ಸಿಬಿಐಗೆ ಕೊಡಿ- ಬಿವೈ ವಿಜಯೇಂದ್ರ ಆಗ್ರಹ

11:05 AM Jul 15, 2024 IST | prashanth

ಬೆಂಗಳೂರು,ಜುಲೈ,15,2024 (www.justkannada.in): ಮೈಸೂರಿನ ಮುಡಾ ಅಕ್ರಮ ಕುರಿತು ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ದೇಸಾಯಿ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನ ರಾಜ್ಯ ಸರ್ಕಾರ ನೇಮಿಸಿದ್ದು, ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ಷೇಪಿಸಿದ್ದಾರೆ.

ಈ ಕುರಿತು ಮಾತನಾಡಿದ ಬಿ.ವೈ ವಿಜಯೇಂದ್ರ,  ಮುಡಾ ಹಗರಣ ಸಂಬಂಧ ನ್ಯಾಯಾಂಗ ತನಿಖೆಗೆ ನಾವು ಒಪ್ಪಲ್ಲ. ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿದರು.

ದಲಿತರಿಗೆ ಮೀಸಲಿರುವ ಜಾಗವನ್ನ ಕೊಳ್ಳೆ ಹೊಡೆದಿದ್ದಾರೆ.  ಕಾಂಗ್ರೆಸ್ ಸರ್ಕಾರ ಬೂಟಾಟಿಕೆ ಮಾಡೊದು ಬೇಡ.  ಸದನದ ಒಳಗೆ ಹೊರಗೆ ನಾವು  ಹೋರಾಡುತ್ತೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

Key words: Muda scam, Judicial investigation, CBI, BY Vijayendra

Tags :
BY VijayendraCBIjudicial investigation.Muda scam
Next Article