For the best experience, open
https://m.justkannada.in
on your mobile browser.

ಮುಡಾ ಹಗರಣ: ನನಗೂ ಅದಕ್ಕೂ ಸಂಬಂಧವಿಲ್ಲ- ಯತೀಂದ್ರ ಸಿದ್ದರಾಮಯ್ಯ

06:33 PM Jul 02, 2024 IST | prashanth
ಮುಡಾ ಹಗರಣ  ನನಗೂ ಅದಕ್ಕೂ ಸಂಬಂಧವಿಲ್ಲ  ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜುಲೈ,2,2024 (www.justkannada.in): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ 50 : 50 ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಯತೀಂದ್ರ ಸಿದ್ಧರಾಮಯ್ಯ, ಈ ಕುರಿತು ಈಗಾಗಲೇ ಮಂತ್ರಿಗಳು ಬಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹಗರಣದ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಮೂಡಾ ಕಮಿಷನರ್ ಬದಲಾವಣೆ ಮಾಡ್ತೀನಿ ಅಂದಿದ್ದಾರೆ. ಸುಮ್ಮನೆ ಆರೋಪ ಮಾಡೋದು ಅವರ ಇಮೇಜ್ ಡ್ಯಾಮೇಜ್ ಮಾಡೋಕೆ ಮಾಡೋದು ನೀಚ ಕೆಲಸ ಎಂದು ಕಿಡಿಕಾರಿದರು.

ವಿಶ್ವನಾಥ್ ಯಾವ ಡಾಕ್ಯುಮೆಂಟ್ ಬೇಕು ತೆಗೆದುಕೊಳ್ಳಲಿ. ಅವರು ಕೂಡ ಮುಡಾ ಮೆಂಬರ್ ಇದ್ದಾರೆ. ಈ ಹಗರಣ ಹೆಚ್ಚು ಬಿಜೆಪಿ ಕಾಲದಲ್ಲೇ ಆಗಿದೆ. ಏನೇನು ಮಾಹಿತಿ ಹೊರಗಡೆ ಬರತ್ತೆ ಬರಲಿ ಜನರೇ ತೀರ್ಮಾನ ಮಾಡುತ್ತಾರೆ. ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಹೇಳಿದರು.

Key words: Muda, scandal, Yatindra Siddaramaiah

Tags :

.