For the best experience, open
https://m.justkannada.in
on your mobile browser.

ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ: ಸಚಿವರು ಸಾಥ್

12:25 PM Sep 03, 2024 IST | prashanth
ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ  ಸಚಿವರು ಸಾಥ್

ಮೈಸೂರು,ಸೆಪ್ಟಂಬರ್,3,2024 (www.justkannada.in): ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಚಾಮುಂಡಿ ಬೆಟ್ಟಕ್ಕೆ ಕಾರಿನಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಣೆಗೆ ಅರ್ಚಕರು ಕುಂಕುಮವಿಟ್ಟರು. ನಂತರ  ತಾಯಿ ಚಾಮುಂಡೇಶ್ವರಿ ಪಾದುಕೆಗೆ ನಮಸ್ಕರಿಸಿದ  ಸಿಎಂ ಸಿದ್ದರಾಮಯ್ಯ ನಂತರ ಈಡುಗಾಯಿ ಒಡೆದರು. ಇನ್ನೂ

ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಸಚಿವರಾದ ವೆಂಕಟೇಶ್, ರಾಮಲಿಂಗರೆಡ್ಡಿ, ಶಾಸಕ  ರವಿ ಶಂಕರ್ ಉಪಸ್ಥಿತರಿದ್ದರು.

Key words: myore, Chamundi hills, CM Siddaramaiah, visited

Tags :

.