HomeBreaking NewsLatest NewsPoliticsSportsCrimeCinema

ಪುತ್ರನ ಅಗಲಿಕೆ ನೋವು ತಾಳಲಾರದೆ ತಾಯಿ ಆತ್ಮಹತ್ಯೆ

10:31 AM Jul 02, 2024 IST | prashanth

ಮೈಸೂರು,ಜುಲೈ,2,2024 (www.justkannada.in): ಪುತ್ರನ ಅಗಲಿಕೆ ನೋವು ತಾಳಲಾರದೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಕೂರ್ಗಳ್ಳಿಯಲ್ಲಿ ನಡೆದಿದೆ.

ಭಾಗ್ಯಮ್ಮ (46) ಪುತ್ರನ ಅಗಲಿಕೆ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡವರು. ನಿನ್ನೆ ಮನೆಯಲ್ಲಿ ಭಾಗ್ಯಮ್ಮ ನೇಣಿಗೆ ಶರಣಾಗಿದ್ದಾರೆ. ಜೂನ್ 9 ರಂದು  ಪುತ್ರ ಅಭಿಷೇಕ್ ನನ್ನು ಭಾಗ್ಯಮ್ಮ ಅವರ ಅಳಿಯ ರವಿಚಂದ್ರನ್  ಕೊಲೆ ಮಾಡಿದ್ದನು. ಕುವೆಂಪುನಗರದಲ್ಲಿ ಹತ್ಯೆ ನಡೆದಿತ್ತು.

ಅಳಿಯ ರವಿಚಂದ್ರನ್ ವರದಕ್ಷಿಣೆಗೆ ಪೀಡಿಸಿ ಪತ್ನಿಗೆ ಹಲ್ಲೆ ಮಾಡಿದ್ದನು. ಹೀಗಾಗಿ  ತನ್ನ ತಂಗಿಗೆ ಹಲ್ಲೆ  ಮಾಡಿದ ಹಿನ್ನೆಲೆ ಜಗಳ ಬಿಡಿಸಲು ಅಭಿಷೇಕ್  ಹೋಗಿದ್ದನು. ಈ ವೇಳೆ ಭಾವ ರವಿಚಂದ್ರ  ಚಾಕು ಇರಿದು ಅಭಿಷೇಕ್ ನನ್ನು ಹತ್ಯೆ ಮಾಡಿದ್ದನು.

ಈ ಮಧ್ಯೆ ಅಂದಿನಿಂದ ಮಗನ ನೆನಪಲ್ಲಿಯೇ ತಾಯಿ ಭಾಗ್ಯಮ್ಮ ಖಿನ್ನತೆಗೆ ಜಾರಿದ್ದರು. ಮಗನ ಅಗಲಿಕೆ ನೋವು ತಾಳಲಾರದೆ ಭಾಗ್ಯಮ್ಮ ನಿನ್ನೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: mysore, pain,  son, death, mother, suicide

Tags :
deathMotherMysore.painsonsuicide.
Next Article