HomeBreaking NewsLatest NewsPoliticsSportsCrimeCinema

ಗಲಭೆ ನಡೆಸಿದವರನ್ನ ಬಿಟ್ಟು ಗಣೇಶ ಕೂರಿಸಿದವರ ಬಂಧನ: ಸರ್ಕಾರದ ವಿರುದ್ದ ಅಶ್ವಥ್ ನಾರಾಯಣ್ ಆಕ್ರೋಶ

11:35 AM Sep 16, 2024 IST | prashanth

ಮಂಡ್ಯ,ಸೆಪ್ಟಂಬರ್,16,2024 (www.justkannada.in): ನಾಗಮಂಗಲದಲ್ಲಿ ಗಲಭೆ ನಡೆಸಿದವರನ್ನ ಬಿಟ್ಟು ಗಣೇಶ ಕೂರಿಸಿದವರವನ್ನ ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಶಾಸಕ ಹಾಗೂ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅಶ್ವಥ್ ನಾರಾಯಣ್, ಚುನಾವಣೆ ಹಿನ್ನೆಲೆ ದ್ವೇಷದ ರಾಜಕಾರಣ ಮಾಡುತ್ತಿರುವುದು ಕಂಡು ಬಂದಿದೆ.   ಪ್ರಕರಣದ ಹಿಂದೆ ಪಿಎಫ್ ಐ ಕೈವಾಡದ ಬಗ್ಗೆ ಮಾಹಿತಿ ಇದೆ. ಪಾಕ್ ಪರ ಘೋಷಣೆ ಕೂಗಿದ ಬಗ್ಗೆಯೂ ಮಾಹಿತಿ ಬಂದಿದೆ. ಪ್ರಕರಣ ಹಿಂದೆ ಯಾರೆಲ್ಲ ಇದ್ದಾರೆ . ಯಾರು ಕುಮ್ಮಕ್ಕು ನೀಡಿದ್ದಾರೆ. ಇದೆಲ್ಲದಕ್ಕೆ ಎಲ್ಲಂದ ಹಣ ಬಂದಿದೆ ಎಲ್ಲವನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ  ಎಂದರು.

ಬಿಜೆಪಿ ಸತ್ಯಶೋಧನಾ ತಂಡ ಘಟನಾ ಸ್ಥಳ ಪರಿಶೀಲಿಸಿದೆ.  ಗಲಭೆ ಬಗ್ಗೆ ಸಮಗ್ರ ವರದಿ ಸಂಗ್ರಹಿಸಿ ಪಕ್ಷಕ್ಕೆ  ಮತ್ತು ಸರ್ಕಾರಕ್ಕೆ ವರದಿ ನೀಡುತ್ತೇವೆ  ಎಂದು ಅಶ್ವಥ್ ನಾರಾಯಣ್ ಹೇಳಿದರು.

Key words: Nagamangala, roit, case, MLA, Ashwath Narayan

Tags :
Ashwath NarayancaseMLANagamangalaroit
Next Article