ಮಂಡ್ಯದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಗಂಡಸರಿಲ್ವಾ..? ಕಾಂಗ್ರೆಸ್ ಶಾಸಕ ವಾಗ್ದಾಳಿ.
05:30 PM Feb 08, 2024 IST
|
prashanth
Tags :
ಮಂಡ್ಯ,ಫೆಬ್ರವರಿ,8,2024(www.justkannada.in): ಈ ಬಾರಿಯೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಚರ್ಚೆಯಾಗುತ್ತಿದ್ದು ಈ ಕುರಿತು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಗಂಡಸರಿಲ್ವಾ. ? ಲೀಡರ್ ಮಕ್ಕಳೇ ಇಲ್ಲಿ ಚುನಾವಣೆಗೆ ನಿಲ್ಲಬೇಕಾ? ಎಂದು ವಾಗ್ದಾಳಿ ನಡೆಸಿದರು.
ಈ ಕುರಿತು ಮಾತನಾಡಿದ ಶಾಸಕ ಕದಲೂರು ಉದಯ್, ಮಂಡ್ಯ, ಮದ್ದೂರಿನಲ್ಲಿ ಗಂಡಸರು ಇಲ್ವಾ? ಬೇರೆ ಜಿಲ್ಲೆಯವರು ಯಾಕೆ ಬರಬೇಕು? ಜಿಲ್ಲೆಯ ಜೆಡಿಎಸ್ನಲ್ಲಿ (JDS) ಸಮರ್ಥರಿಲ್ವಾ. ಅವರ ಕುಟುಂಬದವರೇ ಜಿಲ್ಲೆಗೆ ಬರಬೇಕಾ ಯಾರು ಬಂದರೂ ಎದುರಿಸಲು ನಮ್ಮ ಕಾಂಗ್ರೆಸ್ನಲ್ಲಿ ಸಿದ್ಧರಿದ್ದೇವೆ ಎಂದರು.
ಜನರ ಸೇವೆ ಮಾಡುವವರು ಕ್ಷೇತ್ರದಲ್ಲಿ ನಿರಂತರವಾಗಿ ಇರಬೇಕು. ಐದು ವರ್ಷದಿಂದ ನಿಖಿಲ್ ಕುಮಾರಸ್ವಾಮಿ ಎಲ್ಲಿ ಹೋಗಿದ್ರು? ಚುನಾವಣೆ ಬಂದಾಗ ಬರೋಕೆ ಜನ ದಡ್ಡರಲ್ಲ ಎಂದು ಹರಿಹಾಯ್ದರು.
Key words: No men - contest - JDS -in –Mandya- Congress- MLA
Next Article