HomeBreaking NewsLatest NewsPoliticsSportsCrimeCinema

ದರ್ಶನ್ ಅಂತವರಿಗೆ ಎಲ್ಲಾ ವ್ಯವಸ್ಥೆ: ನನಗೆ ಒಂದು ಇಡ್ಲಿನೂ ಕೊಡಲಿಲ್ಲ- ಕರವೇ ಅಧ್ಯಕ್ಷ ನಾರಾಯಣಗೌಡ ಆಕ್ರೋಶ

12:12 PM Aug 28, 2024 IST | prashanth

ಬೆಂಗಳೂರು,ಆಗಸ್ಟ್,28,2024 (www.justkannada.in):  ಪರಪ್ಪನ ಅಗ್ರಹಾರದಲ್ಲಿ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಕರವೇ ಅಧ್ಯಕ್ಷ ನಾರಾಯಣಗೌಡ,  ನಟ ದರ್ಶನ್ ಅಂತಹ ದೊಡ್ಡವರಿಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ ಬಡ ಕೈದಿಗಳಿಗೆ ಕಳಪೆ ಆಹಾರ ನೀಡುತ್ತಾರೆ. ಜೈಲಿನಲ್ಲಿ ಏನು ಬೇಕಾದರೂ ಕೊಡುತ್ತಾರೆ. ಎಲ್ಲದಕ್ಕೂ ಹಣ ಫಿಕ್ಸ್  ಮಾಡಿದ್ದಾರೆ ಎಂದು ಆರೋಪಿಸಿದರು.

ನಾನು ಕನ್ನಡಕ್ಕಾಗಿ ಹೋರಾಡಿ ಜೈಲು ಸೇರಿದ್ದೆ 16 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿದ್ದೆ. ಆ ವೇಳೆ ನನಗೆ  ಹುಷಾರಿಲ್ಲ ಅಂದ್ರೂ ಒಂದು ಇಡ್ಲಿ ಕೊಡಲಿಲ್ಲ. ಹೊರಗಿನಿಂದ ಇಡ್ಲಿ ತರಲು ಆಗಲ್ಲ.  ಈ ಆಹಾರವನ್ನೇ ತಿನ್ನಿ ಎಂದರು. ಆದರೆ ದೊಡ್ಡವರಿಗೆ ಹೊರಗಿನಿಂದ ಆಹಾರ ವ್ಯವಸ್ಥೆ ಎಲ್ಲವನ್ನೂ ಕೊಡುತ್ತಾರೆ ಎಂದು ನಾರಾಯಣಗೌಡ ಕಿಡಿಕಾರಿದರು.

Key words:  parappana agrahara, Actor Darshan, karave, Narayana gowda

Tags :
actor DarshanKaraveNarayana GowdaParappana Agrahara.
Next Article