HomeBreaking NewsLatest NewsPoliticsSportsCrimeCinema

ಬೆಳಗಾವಿಯಲ್ಲಿ ರೈತರು, ಮಕ್ಕಳಿಂದ ಪ್ರತಿಭಟನೆ: ಬಿಗುವಿನ ವಾತಾವರಣ.

05:23 PM Dec 08, 2023 IST | prashanth

ಬೆಳಗಾವಿ,ಡಿಸೆಂಬರ್,8,2023(www.justkannada.in):  ಭೂಮಿ ಉಳುವಿಗಾಗಿ  ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಕುಲುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಇಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಳಗಾವಿಯ ಚೆನ್ನಮ್ಮ ವೃತ್ತದ ಬಳಿ ಮಕ್ಕಳು ಜಾನುವಾರುಗಳೊಂದಿಗೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಕುಲುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಗ್ರಾಮಗಳ ರೈತರು ಧರಣಿ ನಡೆಸಿದ್ದು, ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತ ರೈತರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಇದೇ ವೇಲೆ ಬಾಲಕಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಭೂಮಿ ಮರು ಸಮೀಕ್ಷೆ ನಡೆಸಬೇಕು. ಜಮೀನು ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು  ಸ್ಥಳಕ್ಕೆಕಂದಾಯ ಸಚಿವರು ಬರುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಸ್ಥಳದಲ್ಲಿ  ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು 200ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

Key words:  Protest –farmers-children – Belgaum

Tags :
BelgaumchildrenFarmersprotest
Next Article