HomeBreaking NewsLatest NewsPoliticsSportsCrimeCinema

ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಶಿಫಾರಸು- ಸಿಎಂ ಸಿದ್ದರಾಮಯ್ಯ

03:58 PM Aug 20, 2024 IST | prashanth

ಬೆಂಗಳೂರು,ಆಗಸ್ಟ್,20,2024 (www.justkannada.in): ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಸಿಎಂ  ಡಿ. ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಶಿಫಾರಸು ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿರುವ ದೇವರಾಜ ಅರಸುರವರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.

ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜೀವ್ ಗಾಂಧಿ ಹುಟ್ಟಿದ ದಿನವೇ ದೇವರಾಜ ಅರಸು ಹುಟ್ಟಿದ್ದಾರೆ. ಯಾವುದೇ ಕಾರಣಕ್ಕ ನಾನು ಸಾಮಾಜಿಕ ನ್ಯಾಯದ ಪರ ಇರ್ತೇನೆ. ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ಕೊಡುವಂತೆ ಶಿಫಾರಸು ಮಾಡುತ್ತೇನೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯನ್ನ   ದೇವರಾಜ ಅರಸು ಎಲೆಕ್ಟ್ರಾನಿಕ ಸಿಟಿ ಎಂದು ಮರು ನಾಮಕರಣ ಮಾಡುತ್ತೇವೆ ಎಂದರು.

Key words: Recommending, Bharat Ratna, Devaraja Arasu, CM Siddaramaiah

Tags :
Bharat RatnaCM SiddaramaiahDevaraja ArasuRecommending
Next Article