For the best experience, open
https://m.justkannada.in
on your mobile browser.

ಸಾಯುವ ಮುನ್ನ ರೇಣುಕಾಸ್ವಾಮಿ  ಅಂಗಲಾಚಿದ ಫೋಟೊ ವೈರಲ್

10:30 AM Sep 05, 2024 IST | prashanth
ಸಾಯುವ ಮುನ್ನ ರೇಣುಕಾಸ್ವಾಮಿ  ಅಂಗಲಾಚಿದ ಫೋಟೊ ವೈರಲ್

ಬೆಂಗಳೂರು,ಸೆಪ್ಟಂಬರ್,5,2024 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 17ಆರೋಪಿಗಳ​ ವಿರುದ್ಧ ಕೋರ್ಟ್ ಗೆ  ಚಾರ್ಜ್​ಶೀಟ್​ ಸಲ್ಲಿಕೆ ಆಗಿದೆ. ಈ  ಬೆನ್ನಲ್ಲೇ ಇದೀಗ  ರೇಣುಕಾ ಸ್ವಾಮಿ ಸಾಯುವ ಮುನ್ನ ರೇಣುಕಾಸ್ವಾಮಿ  ಅಂಗಲಾಚುತ್ತಿದ್ದ   ಫೋಟೋವೊಂದು ವೈರಲ್ ಆಗಿದೆ.

ಹೌದು ನಿನ್ನೆ ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದು, ಪವಿತ್ರಾಗೌಡ ಮೊದಲ ಆರೋಪಿ ಹಾಗೂ  ನಟ ದರ್ಶನ್ 2ನೇ ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ. ಈ ಮಧ್ಯೆ ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ಹತ್ಯೆಗೂ ಮುನ್ನ ಕೈ ಮುಗಿದು ಅಂಗಲಾಚುತ್ತಿರುವ ಫೋಟೋವೊಂದು ವೈರಲ್ ಆಗಿದೆ.  ಶೆಡ್​ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.

ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋ ಮಾತ್ರವಲ್ಲದೆ  ಶವವಾಗಿ ಬಿದ್ದ ಫೋಟೋಗಳು ಸಿಕ್ಕಿವೆ. ಆರೋಪಿಗಳ ಮೊಬೈಲ್​ ನಲ್ಲಿ ಇದನ್ನು ಸೆರೆಹಿಡಿದುಕೊಳ್ಳಲಾಗಿತ್ತು. ಆ ಬಳಿಕ ಇದನ್ನು ಡಿಲೀಟ್ ಮಾಡಿದ್ದರು. ಈಗ ಈ ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Renukaswamy, murder, photo, viral, Actor Darshan

Tags :

.