For the best experience, open
https://m.justkannada.in
on your mobile browser.

ನನ್ನ ವಿರುದ್ದ ಆರೋಪ ಸಾಬೀತಾದ್ರೆ ರಾಜೀನಾಮೆ: ತನಿಖೆ ನಡೆಯುವವರೆಗೂ ಸದನಕ್ಕೆ ಬರೋದೆ ಇಲ್ಲ- ಶಾಸಕ ಬಿಆರ್ ಪಾಟೀಲ್.

06:15 PM Nov 29, 2023 IST | prashanth
ನನ್ನ ವಿರುದ್ದ ಆರೋಪ ಸಾಬೀತಾದ್ರೆ ರಾಜೀನಾಮೆ  ತನಿಖೆ ನಡೆಯುವವರೆಗೂ ಸದನಕ್ಕೆ ಬರೋದೆ ಇಲ್ಲ  ಶಾಸಕ ಬಿಆರ್ ಪಾಟೀಲ್

ಬೆಂಗಳೂರು,ನವೆಂಬರ್,29,2023(www.justkannada.in): ಕೆಆರ್ ಐಡಿಎಲ್ ಕಾಮಗಾರಿ ಸಂಬಂಧ ಸಚಿವರ ವಿರುದ್ದ ಅಸಮಾಧಾನಗೊಂಡು  ಸಿಎಂ ಸಿದ್ದರಾಮಯ್ಯಗೆ ಅಳಂದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಅವರು ಇದೀಗ ಮತ್ತೊಮ್ಮೆ ಇದೇ ವಿಚಾರ ಪ್ರಸ್ತಾಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಬಿಆರ್ ಪಾಟೀಲ್, ನನ್ನ ವಿರುದ್ದ ಕೇಳಿ ಬಂದಿರುವ ಆರೋಪ ಸಾಬೀತಾದ್ರೆ ರಾಜೀನಾಮೆ ನೀಡುತ್ತೇನೆ.  ಕೃಷ್ಣೆ ಬೈರಗೌಡರ ಆರೋಪದ ಬಗ್ಗೆ ತನಿಖೆಯಾಗಬೇಕು.  ಸದನದಲ್ಲಿ ನನ್ನ ವಿರುದ್ದ ಮಾತನಾಡಿದ್ದಾರೆ. ನಾನು  ತನಿಖೆ ನಡೆಯುವವರೆಗೂ ಸದನಕ್ಕೆ ಬರುವುದೇ ಇಲ್ಲ. ಇದರ ಸತ್ಯಾಸತ್ಯತೆ ಹೊರಗೆ ಬರಬೇಕು ಎಂದಿದ್ದಾರೆ.

ಹೀಗೆ ಮಾತನಾಡಬೇಕೆಂಬ ಅಜೆಂಡಾ ಇಲ್ಲ. ಈಗಾಗಲೇ ನನ್ನ ಅಭಿಪ್ರಾಯವನ್ನ ಸಿಎಂಗೆ ಬರೆದ ಪತ್ರದಲ್ಲಿ ವಿವರಿಸಿದ್ದೇನೆ. ಈ ಬಗ್ಗೆ ಮಾತನಾಡಲು ಸಿಎಂ ಕರೆದಿದ್ದಾರೆ. ಸಿಎಂ ಜೊತೆ ಮಾತನಾಡಲು ನಾನು ಹೋಗುತ್ತಿದ್ದೇನೆ ಎಂದರು.

Key words: resign -if -allegations – proved- MLA- BR Patil.

Tags :

.