For the best experience, open
https://m.justkannada.in
on your mobile browser.

ಸಿದ್ಧರಾಮಯ್ಯ ಹಿಂದೂ ವಿರೋಧಿ: ಗಣೇಶ ಭಕ್ತರಿಗೆ ದ್ರೋಹ- ಎಂಎಲ್ ಸಿ ರವಿಕುಮಾರ್ ವಾಗ್ದಾಳಿ

12:01 PM Sep 18, 2024 IST | prashanth
ಸಿದ್ಧರಾಮಯ್ಯ ಹಿಂದೂ ವಿರೋಧಿ  ಗಣೇಶ ಭಕ್ತರಿಗೆ ದ್ರೋಹ  ಎಂಎಲ್ ಸಿ ರವಿಕುಮಾರ್ ವಾಗ್ದಾಳಿ

ಬೆಂಗಳೂರು,ಸೆಪ್ಟಂಬರ್,18,2024 (www.justkannada.in): ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿ, ಗಣೇಶ ಭಕ್ತರಿಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರವಿ ಕುಮಾರ್ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ರವಿಕುಮಾರ್, ಕರ್ನಾಟಕದಲ್ಲಿ ಸುರಕ್ಷತೆಯೇ ಇಲ್ಲವಾಗಿದೆ. ರಾಜ್ಯದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ.  ಪ್ಯಾಲೆಸ್ತೇನ್  ಧ್ವಜ ಹಿಡಿದು ಓಡಾಡುತ್ತಾರೆ. ರಾಮೇಶ್ವರಂ ಕೆಫೆ ಮೇಲೆ ಬಾಂಬ್ ಹಾಕಿದ್ದಾರೆ ಎಂದು  ಹರಿಹಾಯ್ದರು

ಹಾಗೆಯೇ   ಎಲ್ಲಾ ಇಲಾಖೆಯ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ದ ರವಿಕುಮಾರ್ ವಾಗ್ದಾಳಿ ನಡೆಸಿದರು.

Key words: Siddaramaiah, anti-Hindu, MLC, Ravikumar

Tags :

.