For the best experience, open
https://m.justkannada.in
on your mobile browser.

ಶ್ರೀಕೃಷ್ಣ ಜನ್ಮಾಷ್ಟಮಿ : , ಗೋಪೂಜೆಯಲ್ಲಿ ಪಾಲ್ಗೊಂಡ ಮೇಘಾಲಯದ ರಾಜ್ಯಪಾಲರು.

08:35 PM Aug 26, 2024 IST | mahesh
ಶ್ರೀಕೃಷ್ಣ ಜನ್ಮಾಷ್ಟಮಿ     ಗೋಪೂಜೆಯಲ್ಲಿ ಪಾಲ್ಗೊಂಡ ಮೇಘಾಲಯದ ರಾಜ್ಯಪಾಲರು

ಮೈಸೂರು, ಆ.26,2024: (www.justkannada.in news) ಯಾದವಗಿರಿಯ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ  ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮೇಘಾಲಯದ ರಾಜ್ಯಪಾಲ ಶ್ರೀ ವಿಜಯ್ ಶಂಕರ್ ಭಾಗವಹಿಸಿ, ಗೋಪೂಜೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಮಾತನಾಡಿದ ಮೇಘಾಲಯದ ರಾಜ್ಯಪಾಲ ಶ್ರೀ ವಿಜಯ್ ಶಂಕರ್ ಅವರು, ಅನೇಕ ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆಸಲ್ಲಿಸುತ್ತಿರುವ ಶ್ರೀರಾಮಕೃಷ್ಣ ಆಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ರಾಷ್ಟ್ರಕವಿ ಕುವೆಂಪು ವಿರಚಿತ ಶ್ರೀರಾಮಕೃಷ್ಣರ ಜೀವನಚರಿತ್ರೆಯನ್ನು ,ವಿವೇಕಾನಂದರ ಜೀವನಚರಿತ್ರೆಯನ್ನು ಓದಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು‌.ಈ ಎರಡು ಕೃತಿಗಳನ್ನು ಓದಿದರೆ ದೇಶದ ಬಗ್ಗೆ ,ನಮ್ಮ ಪರಂಪರೆಯ ಮಹತ್ವದ ದರ್ಶನವಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು‌ ಹಾಗೂ ಶ್ರೀರಾಮಕೃಷ್ಣ ಆಶ್ರಮದ ಟ್ರಸ್ಟಿಗಳಾಗಿರುವ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ , ಶ್ರೀರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥರಾದ ( ಕರೆಸ್ಪಾಂಡೆಂಟ್) ಸ್ವಾಮಿ ಯುಕ್ತೇಶಾನಂದಜೀ, ಶ್ರೀರಾಮಕೃಷ್ಣ ವಿದ್ಯಾಶಾಲೆಯ ಪ್ರಾಂಶುಪಾಲರಾದ ಟಿ.ಕೆ.ಚಂದ್ರಶೇಖರ್ ಹಾಗೂ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಬೋಧಕ ,ಬೋಧಕೇತರ ವರ್ಗದವರು ಭಾಗವಹಿಸಿದ್ದರು.

key words: Sri Krishna Janmashtami, Governor of Meghalaya, Vijayshankar, participates in, cow puja, at Mysore, Ramakrishna matt

Tags :

.